Irabeku iruvante ( ಇರಬೇಕು ಇರುವಂತೆ)|DR H S VENKATESH MURTHY|RAGHAVENDRA BEEJADI
Вставка
- Опубліковано 21 вер 2019
- Lyrics:- Dr H S Venkateshmurthy
Music:- Raghavendra beejadi
Instrumentation:- @SameerRao
singer :- Raghavendra beejadi
we use some images from Google.. our humble pranamas to all the artists..
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ||ಪ||
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿಗುರುಳು ಬಿಟ್ಟು
ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟು
ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು||೧||
ತಾನು ಕೆಸರಲಿ ಕುಸಿಯುತ್ತಿದ್ದರೂ ತಾವರೆಯು
ಮರಿದುಂಬಿಗಳ ಪೊರೆವ ತೊಟ್ಟಿಲಾಗಿ
ಹೇಗೆ ತಾಯ್ತನವನ್ನು ಪ್ರೀತಿಯಲಿ ಮೆರೆಯುವುದೋ
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ದಾರಿಯುದ್ದಕೂ ಪೈರು ನಗುವಂತೆ ನೀರುಣಿಸಿ
ಹಾಲುತೆನೆಯಲಿ ಅಮೃತ ತುಂಬಿ ನದಿಯು
ಹೇಗೆ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ
ಹಾಗೆ ಕೊನೆಗಾಣಿಸು ಕೃಪೆಯನಿಟ್ಟು||೨||
ರಚನೆ ಎಚ್ಚೆಸ್ವಿ
ಸಂಗೀತ ರಾಘವೇಂದ್ರ ಬೀಜಾಡಿ
ಯಾರ್ಯಾರು 2024 ರಲ್ಲಿ ಕೇಳುತ್ತಿದ್ದೀರಿ ಲೈಕ್ ಮಾಡಿ
ಲೆಕ್ಕ ಇಟ್ಟಿದ್ದೇನೆ ಇದು 157ನೇ ಬಾರಿ ನಾನು ಕೇಳುತ್ತಿರುವುದು ಪ್ರತಿ ಬಾರಿಯೂ ಹೊಸ ದಾಗಿ ಕೇಳಿದಂತಿದೆ 👌👌👌🙏🙏
ನಿಮ್ಮ ಅಭಿಮಾನ ದೊಡ್ಡದು ... ಚಿರ ಋಣಿ ನಾನು..
ನನಗಂತೂ ಗೊತ್ತೇ ಇಲ್ಲ, ಎಷ್ಟು ಬಾರಿ ಕೇಳಿಯಾಗಿದೆ ಅಂತ……. ಪ್ರತೀಬಾರಿ ಕೇಳಿದಾಗಲೂ ಮನಸ್ಸು ಹಗುರಾಗುತ್ತೆ………
even i feel same mam..
Same here .
Super sir nivu
2024 ಆದರೂ ಇನ್ನೂ ಕೇಳಬೇಕು ಅನಿಸುವ ಹಾಡು
ನನ್ನ ಒಂದು ವರ್ಷದ ಮಗು ಮಲಗುವುದು ಇದೆ ಹಾಡಿನಿಂದ... ಕನ್ನಡದ ಅರ್ಥಗರ್ಭಿತ ಹಾಡುಗಳಲ್ಲಿ ಇದೂ ಒಂದು ❤️
Super ❤
ಮಕ್ಕಳಿಂದ ದೂರ ಇಡಿ ಮೊಬೈಲ್ ಅನ್ನು
Thumba santhosha kannadigare
So sweet🥳
ಬರೆಯಬೇಕು ನಿಮ್ಮಂತೆ
ಹಾಡು ಬೇಕು ನಿಮ್ಮಂತೆ
ಜನರು ಸಾಲಾಗಿ ನಿಂತು ಕೇಳುವಂತೆ
ಎಲ್ಲರಿಗೂ ಅಭಿನಂದನೆಗಳು ಸರ್
ಸಾಲಾಗಿ ನಿಂತು ಅಲ್ಲ" ಮೈಮರೆತು ಕೇಳುವಂತೆ" ಸೂಕ್ತ ಅನಿಸಲ್ಲವೇ ಸರ್
Waahhhh
Woww your lines also amazing
❤
Super lines sir
ಅರ್ಥಪೂರ್ಣ ಹಾಡು 👌👌ಯಾರದ್ದೊ ವ್ಯಾಟ್ಸಪ್ ಸ್ಟೆಟಸ್ ನಲ್ಲಿ ಕೆೇಳಿದ ಸಾಲುಗಳು ಕರೆತಂತು ನನ್ನಿಲ್ಲಿಗೆ 😍
ನಾನೂ ಕೂಡ....
ನಾನೂ ಕೂಡ
ಎಂಥ ಸಾಹಿತ್ಯ!!!
ನನಗೂ ಸಹ ಇಲ್ಲಿಗೆ ಕರೆತಂತು
Same bro♥️
ಇರಬೇಕು ದ್ವನಿ ನಿಮ್ಮಂತೆ
ನಲಿಬೇಕೂ ಮನಸು ಚಿಗರೆಯಂತೆ
ಕರಗಲಿ ಚಿಂತೆ ಚಿತೆಯಂತೆ
ಇರಬೇಕು ಎಲ್ಲರಿಗೂ ಆಸರೆಯಂತೆ
🙏🙏🙏
👌😇
🎉
ನೊಂದ ಜೀವಕ್ಕೆ ಒಳ್ಳೆಯ ಹಾಡು ❤❤❤😢😢😢
ಎಷ್ಟೆಲ್ಲ ಅರ್ಥಪೂರ್ಣ ಕವಿತೆಗಳು ಇಷ್ಟು ಸಮಯ ಸುಪ್ತವಾಗಿಯೇ ಇದ್ದವು. ಈಗ ಕೇಳುವಾಗ ರೋಮಾಂಚನವಾಗುತ್ತದೆ. ಧನ್ಯವಾದಗಳು ನಿಮಗೆ.
ಅಹುದು ಕವಿವರ್ಯ 🙏
👍
ಖಂಡಿತವಾಗಿಯೂ ಈ ಹಾಡನ್ನು ಒಂದು ಸಲ ಕೇಳಿ ಸುಮ್ಮನಿರಲು ಸಾಧ್ಯವೇ ಇಲ್ಲ 👌👌
ಅಧ್ಬುತ ಗಾಯನ..ಅಷ್ಟೇ ಅಧ್ಬುತ ಸಾಹಿತ್ಯ..ಬದುಕಿನ ಅರ್ಥಪೂರ್ಣ ವಾದ ಹಾಡು😍👌🙏🙏🙏
ನಾನಂತೂ ಈ ಅದ್ಭುತ ಗಾಯನಕ್ಕೆ (ಗಾಯನ ಸಿರಿಗೆ) ಮೈಮರೆತು ಮಾರುಹೋಗಿದ್ದೆನೆ ಕೆಳಿದಷ್ಟು ಇನ್ನಷ್ಟು ಕೇಳಬೇಕೆನಿಸುತ್ತಿದೆ ತುಂಬಾದ ಇಂಪಾದ ಗಾಯನ ತಂಪಾದ ತಂಗಾಳಿ ಅಲೆಯಂತೆ ಸೂಸಿ ಬರುತ್ತದೆ. ಈ ಸುಮಧುರ ಸಂಗೀತ.
ಒಳ್ಳೆ ಹಾಡು ಕೇಳಿ ದಿನಕ್ಕೊಮ್ಮೆ
ನಿಜ್ವಾಗ್ಲೂ ಸಮಾಜದ ಬಗ್ಗೆ ಅಪಾರ ಕಾಳಜಿ ಇಟ್ಕೊಂಡು ಕೆಲಸ ಮಾಡೋರಿಗೆ ಈ ಸಾಲುಗಳು ಕಣ್ಣಲ್ಲಿ ನೀರು ತರಿಸದೇ ಇರೋಕೆ ಸಾಧ್ಯವಿಲ್ಲ... 👌🏻🙏🏻
ನಾನು ಪ್ರತಿದಿನ ಈ ಹಾಡು ಕೇಳಿಲ್ಲ ಅಂದ್ರೆ ನನಗೇನು ಒಂದು ಕಳೆದುಕೊಂಡ ಹಾಗೆ ಆಗುತ್ತೆ.......❤️❤️❤️❤️❤️
ನೊಂದ ಜೀವಕ್ಕೆ ಸಾಂತ್ವನ ಹೇಳುವಂತಿದೆ ಈ ಗೀತೆ...ಗಾಯಕರೆ, ರಚನೆಕಾರರೆ ನಿಮಗಿದೊ ಅನಂತ ಧನ್ಯವಾದಗಳು
ನಿಜ,,ಸ್ಪೂರ್ತಿದಾಯಕವಾಗಿದೆ ಸೋತರು,, ಮತ್ತೆ ಮತ್ತೆ ಗೆಲ್ಲುವ ಸ್ಪೂರ್ತಿ,,,
ನಿಜ
ಹೌದು ಏನೋ ನೆಮ್ಮದಿ ಸಿಗುತ್ತೆ ಸುಮಧುರ ಕಂಠ
Yestu artha adagide e hadalli ..yenta yede biriv novidru kuda .e haadu kelata idre jeevakke samadhan sigutte ..hadiruv gayakarige nann namaskar ....nimm voice Alli yestu madhuravad bhavane adagide ..tq..
@@arerarerarer8351 ,,,,,*,,*lzzzzzzzz,sA Ez🎉E,s
ಆಹಾ ಸಾರ್ಥಕ ಭಾವನೆ ಮೂಡುತ್ತಿದೆ 🙏 ನಿಮ್ಮಂತ ಸಾಧಕರನ್ನ ಪಡೆದ ಕನ್ನಡ ನಾಡಿನ ಕನ್ನಡಿಗರ ಪುಣ್ಯ 💐 ಈ ಗೀತೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿರುತ್ತೇವೆ 🙏 ಜೈ ಕನ್ನಡಾಂಬೆ 💐
ಅದ್ಬುತ ಸಾಹಿತ್ಯ, ಅತ್ಯದ್ಭುತ ಗಾಯನ, ಹೃದಯದ ಒಳಗಿಳಿವ ಸಂಗೀತ. ಧನ್ಯೋಸ್ಮಿ
ಕನ್ನಡ ನೆಲದಲ್ಲಿ ಹುಟ್ಟಿದ ನಾವೆಲ್ಲಾ ಪುಣ್ಯವಂತರು.... ಹೆಚ್.ಎಸ್.ವಿ.ಕವಿಗಳಿಗೆ ನನ್ನ ನಮನಗಳು😘💐
ಎಷ್ಟು ಕೇಳಿದರೂ ಮನಸ್ಸಿಗೆ ತೃಪ್ತಿಯೇ ಸಿಗುವುದಿಲ್ಲ,ತುಂಬ ಬೇಜಾರಿದ್ದಾಗ ನಾನು ಕೇಳುವುದು ಇದ ಗೀತೆಯನ್ನು,ಧನ್ಯವಾದ ಬರೆದವರಿಗೆ,ಹಾಡಿದವರಿಗೆ ಅಭಿನಂದನೆಗಳು
ಅತ್ಯದ್ಭುತ ಸಾಹಿತ್ಯ, ಪ್ರತಿ ದಿನ ಕೇಳುತ್ತೇನೆ ಮನಸ್ಸಿಗೆ ಬೇಸರವಾದಾಗ ಸತತವಾಗಿ ಅರ್ಧ ಗಂಟೆ ಸಾಂಗ್ ಕೇಳುತ್ತೇನೆ ❤❤❤❤❤
ಅಹೋರಾತ್ರ ಸರ್ ಬರೆದಿರುವುದು ಹಾಡುಗಳನ್ನ ನೀವು ಹಾಡಿರುವ ಎಲ್ಲ ಹಾಡುಗಳೂ ಅದ್ಬುತ ಸರ್ ನಿಜಕ್ಕೂ
ಅಹೋರಾತ್ರ ಸಾರ್ ಅಲ್ಲ....ಎಚ್ ಎಸ್ ವೆಂಕಟೇಶ್ ಮೂರ್ತಿ ಸಾರ್
ಬಹಳ ಬೇಸರವಾದಾಗ ಈ ಹಾಡು ಕೇಳಿ Refresh ಆಗ್ತೇನೆ 😍😍😍
ನಾನು ಕೂಡ ಹಾಗೆಯೆ ಸರ್... ಬೇಸರವಾದಾಗ ಗುನುಗಿಕೊಳ್ತೇನೆ ಈ ಹಾಡು
Including me also..
@@RaghavendraBeejadi ಸರ್ ನಾನು ದಿನಾಲೂ ಹಾಡು ಕೇಳಿನೆ ಮಲಗೋದು..
ಸತ್ಯವಾದ ಮಾತು...
ಹಾಗೆ ಬಾಳಿಸು ಗುರುವೇ ಕರುಣೆ ಇಟ್ಟು
ನನ್ನ ಬದುಕಿನ ಭಗವದ್ಗೀತೆ, ಮನಸ್ಸು ಅಲ್ಲೋಲ ಕಲ್ಲೋಲ ವಾದಾಗ ಈ ಗೀತೆ ಆಲಿಸಿದಾಗ ಮನಸು ಶಾಂತಿ ಸಾಗರ, ಕವಿಗಳು , ಗಾಯಕರಿಬ್ಬರಿಗೂ ಅನಂತಆನಂತ ನಮಸ್ಕಾರ
ಗಳು 🌹
ಎಷ್ಟೇ ನೋವಿದ್ದರೂ ಈ ಹಾಡು ಕೇಳಿದಾಕ್ಷಣ ಎಲ್ಲವನ್ನು ಮರೆತುಬಿಡಬಹುದು.... ಎಲ್ಲ ನೋವನ್ನು ಮರೆಸುವ ಶಕ್ತಿ ಈ ಹಾಡೊಳಗಡಗಿದೆ🙏
ಈ ಹಾಡು ಕೇಳಿದ ಪ್ರತಿ ಸಲವೂ ಕಣ್ಣು ತೇವವಾಗುತ್ತವೆ ನನ್ನನ್ನು ತುಂಬಾ ಭಾವಕಳನ್ನಾಗಿ ಮಾಡುತ್ತದೆ. ತುಂಬಾ ಚಿಂತನೆಗೆ ಹಚ್ಚುತ್ತದೆ. ಇಂತಹ ಅದ್ಭುತ ಸಾಹಿತ್ಯಕ್ಕೆ ನಾನು ಅಭಾರಿ....
Me Too
"ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ" ಎಂತಹ ಅತ್ಯದ್ಭುತ ಸಾಲುಗಳುಇದನ್ನು ಬರೆದಂತ ನಮ್ಮ ಕವಿಗೆ ಮತ್ತು ಹಾಡಿದವರಿಗೆ ನನ್ನ ಸಾವಿರ ಕೋಟಿ ಧನ್ಯವಾದಗಳು 💐💐💐💐💐💐💐💐💐💐💐💐
❤
❤
ಈ ಹಾಡನ್ನು ಅಶ್ವಥ್ ನಾರಾಯಣ ಅವರ ಕಂಠದಿಂದ ಕೇಳಬೇಕು ಎಂದು ಆಸೆ ಇರುವವರು ಲೈಕ್ ಮಾಡಿ 👍🏻👇❤
ನೋವಿನಲ್ಲಿ ಇದ್ದ ಮನಸ್ಸು ಈ ಹಾಡು ಕೇಳಿದರೆ ಮನಸ್ಸು ಮುಗಿಲಿನಷ್ಟೇ ಹಗುರವಾಗುತ್ತದೆ.. 🙏
Nija...novidda manasu athu athu haguraguthade. E hadu kelidagella kannanchinalli neeru
ಬಂದೆ ಇಲ್ಲಿಗೆ ಆಕಸ್ಮಿಕವಾಗಿ
ಮರುಳಾದೆ ಗೀತೆಯ ಮಾಧುರ್ಯಕ್ಕೆ.
ಮೊದಲ ಬಾರಿಗೆ ಕೇಳಿದಾಗ ಶಿವಮೊಗ್ಗ ಸುಬ್ಬಣ್ಣನವರು ಹಾಡಿದಂತೆ, ಕೇಳದಂತಿತ್ತು
ವಾವ್ ಅಣ್ಣಾ...! ವಜ್ರದ ಕಂಠದಿಂದ ಮುತ್ತಿನ ಸುರಿಮಳೆ ಸುರಿದಂತೆ ಇದೆ... ಅದ್ಭುತ ಗಾಯನ 👌♥️
ನಿಜ....ಹಾಗೇ ಅನಿಸುತ್ತದೆ.
👌ಹೋಲಿಕೆ
ಲೆಕ್ಕವಿಲ್ಲದ್ದಷ್ಟು ಭಾರೀ ಕೇಳಿದೆ. ಮತ್ತೇ ಮತ್ತೇ ಕೇಳಬೇಕು ಎಂದು ಪ್ರತಿಸಲವೂ ಅನಿಸುತ್ತದೆ.🙏🙏🙏👌👌💕
ಈ ಹಾಡು ಜನರ ಮನಸಿನ ಭಾವನೆಗಳ ಲೋಕದಲಿ ಹಾಡಿಸಿ ಅವರ ಮನಸ್ಥಿತಿಯನ್ನು ಸಮ ಸ್ಥಿತಿಗೆ ತಂದು ಬದುಕು ಇನ್ನೂ ಹಸಿರಾಗಿದೆ ಎಂದು ತಿಳಿಸುವಂತ ಅದ್ಭುತವಾದ ಹಾಡು.
Well said
ಇಂದಿನ ಜಂಜಡದ ಬದುಕಿನ ಮರುಭೂಮಿಯಲ್ಲಿ ಓಯಸಿಸ್ ನಂತೆ ಮೂಡಿ ಬಂದಿರುವ ಅತ್ಯದ್ಭುತ ಸಾಹಿತ್ಯ ಉತ್ಕೃಷ್ಟ ಸ್ವರ ಸಂಯೋಜನೆ ಸುಮಧುರ ಗಾಯನ ಪುನಃ ಪುನಃ ಕೇಳಿದರೂ ಮತ್ತೆ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಸರ್ವರಿಗೂ ಧನ್ಯವಾದಗಳು
ಈ ಹಾಡು ಕೇಳಿದರೇ ಹಾಗೆ ಕೇಳಬೇಕು ಅನಿಸುತ್ತದೆ ಮತ್ತೆ ಮನಸ್ಸು ಸಮಾಧಾನ ಆಗಿತ್ತದೆ ನನ್ನಾ ಎಲ್ಲ ನೂವು ಮರೆಯುತ್ತದೆ ನಿಮ್ಮ ಧ್ವನಿ ಕೂಳಲೂ ತುಂಬ ಖುಷಿ ಕೊಡುತ್ತ 🙏🙏🙏
ಇಂತಾ ಹಾಡುಗಳು ಮನಸನ್ನು ಸಂತೈಸಲು ಆ ಪರಮಾತ್ಮನೇ ಸೃಷ್ಟಿಸುತ್ತನೇ..ಮನಸ್ಸು ಭಾವನಲೋಕದಲ್ಲಿ ತಲ್ಲಿನವಾಗಿ ಬದುಕು ಸಾರ್ಥಕ ಎನಿಸುವುದು...❤❤.
ಇದೊಂದು master piece... 👌
ದಶಮಾನಕ್ಕೆ ಒಂದೇ ಈ ಥರದ ಹಾಡು ಹುಟ್ಟುವುದು..
ಧನ್ಯವಾದಗಳು ಎಲ್ಲರಿಗೂ ಈ ಹಾಡನ್ನು ನಮಗೆ ತಲುಪಿಸಿದ್ದಕ್ಕೆ 🙏
ಕನ್ನಡದ ಪದಗಳು ಮುತ್ತುಗಳಿದಂತೆ ,,ಕನ್ನಡ ನಾಡಿನಲ್ಲಿ ಹುಟ್ಟಿದ ನನ್ನ ಜನ್ಮ ಪುಣ್ಯ 🌹
ಬಾಳಿಗೆ ಧನ್ಯತಾ ಭಾವ ಮೂಡಿಸುವ ಹಾಡು.
ಯಾವ ವಿಷಯವಾಗಲಿ, ಒಳ್ಳೆಯ ಇಚ್ಛಾ ಶಕ್ತಿ ಇಟ್ಟು ನೋಡಿದರೆ ಅದು ಚೆನ್ನಾಗಿ ಕಾಣುತ್ತದೆ ಮತ್ತು ಬದುಕಿಗೆ ಸ್ಪೂರ್ತಿ ತುಂಬುತ್ತದೆ.
ಒಂದೊಂದು ಅರ್ಥಪೂರ್ಣವಾದ ಸಾಲುಗಳು ❤ತುಂಬಾ ಚೆನ್ನಾಗಿದೆ ಸರ್😊
ಡಾ.ಹೆಚ್.ಎಸ್.ವಿ ರವರ ರಚನೆ ನಿಜಕ್ಕೂ ಜೀವನದುದ್ದಕ್ಕೂ ಪ್ರೇರಣೆ ನೀಡುತ್ತದೆ. ಅವರಿಗೆ ನನ್ನ ಅಭಿನಂದನೆಗಳು.
ಈ ಹಾಡನ್ನು ಕೇಳುವಾಗ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ... ತುಂಬಾ ಅರ್ಧ ಗರ್ಭೀತವಾಗಿದೆ. ಸೂಪರ್
ಹೃದಯದ ತರಂಗ ಮೀಟುವ ಸಾಹಿತ್ಯ, ಮತ್ತೆ ಕೋಗಿಲೆಯ ಕಂಠದಿಂದ ಹೊಮ್ಮುವ ಗಾಯನ, ತುಂಬಾ ಚೆನ್ನಾಗಿದೆ.
ಆಹಾ.... ಅದ್ಭುತವಾದ ಸಾಹಿತ್ಯ ದಾ ಜೊತೆಗೆ ಅಮೋಘ ವಾದ ಧ್ವನಿ 😍🙏
ಅದೆಷ್ಟು ಅರ್ಥ ಪೂರ್ಣವಾದ ಸಾಹಿತ್ಯ 👏👏
ನೊಂದ ನನ್ನ ಮನಕ್ಕೆ ಈ ಗೀತೆ ತುಂಬಾ ಹೋಲಿಕೆ ಯಾಗುತಿದೆ, ತುಂಬಾ ಧನ್ಯವಾದ
H S ವೆಂಕಟೇಶಮೂರ್ತಿ ಅವರ ಸಾಹಿತ್ಯಕ್ಕೆ ನನ್ನ ನಮನಗಳು... ಒಂದೊಂದು ಶಬ್ದವು ಮುಗಿಲಿನಿಂದ ಬಿದ್ದಂತಿವೆ.. ಅದ್ಬುತ...😍😍
ನನಗೆ ಇದನ್ನು ಕೇಳಿದಷ್ಟು ಮನಸಿಗೆ ಸಮಾಧಾನ. ದಿನಕ್ಕೆ ಒಂದು ಬಾರಿ ಈಗಲೂ ಕೇಳ್ತೀನಿ. 👏👏
ಮನಸೂರೆಗೊಳುವ ಅದ್ಭುತ ಸಾಹಿತ್ಯ🙏ಜೀವನದ ಅನುಭವ ಸಾಕಾರಗೊಳಿಸಿದ ಕೃತಿ.ಲೇಖಕರಿಗೆಅನಂತ
ಧನ್ಯವಾದಗಳು .ಸಂಗೀತವೂ ತುಂಬಾಚನ್ನಾಗಿ ಮನ ಮುಟ್ಟುವಂತಿದೆ.ಕನ್ನಡ ಸಾಹಿತ್ಯ ಶ್ರೀಮಂತ ವಾಗಲು ಇಂಥಹ
ಕೃತಿಗಳು ಹೀಗೇ ಮೂಡಿಬರಲಿ ಧನ್ಯವಾದಗಳು
ರೇಡಿಯೊದಲ್ಲಿ ತೇಲಿ ಬಂದ ಈ ಹಾಡು ಕೇಳಿ ಯಾರ ಹಾಡು
ಎಷ್ಟು ಅದ್ಭುತವಾಗಿದೆ ಎಂದು ಯೋಚಿಸುವಾಗ ನನ್ನಮೋಮ್ಮಗನಿಗೆ ನೀನು ಎಲ್ಲಾದೂ ಹಾಡುವದಿದ್ದರೆ ಈ ಹಾಡನ್ನೇಹಾಡು ಎಂದಿದ್ದೆ ಅವನ ಈ ಹಾಡು ತುಂಬಾ ಚನ್ನಾಗಿ ಬಂದಿದೆ ಅವನೇ ನನ್ನ ಇಲ್ಲಿ ಕರೆ ತಂದ
ಸಾಹಿತ್ಯಮಯವೀ ಬದುಕಿನಂತಿದೆ ಗೀತೆ..ಕಾಣದ ಬ್ರಹ್ಮನೆ ಗೀಚಿದಂತೆ.💖🙏
ಈ ಹಾಡು ಕೇಳಿದರೆ ಕನ್ನಡ, ಕನ್ನಡ ಸಾಹಿತ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ 🙏🙏, ಎಷ್ಟೊಂದು ಶ್ರೀಮಂತಿಕೆ......
ಅದ್ಬುತ ರಚನೆ ಕಣ್ ಮುಚ್ಚಿ ಆಲಿಸುತಿದ್ದರೆ ಸಾವಿರ ಚಿಂತೆ ಮರೆತು ಹೋಗುತ್ತದೆ ಇಂತರ ಸುಂದರ ಗೀತೆ ಪಡೆದ ನಾವೇ ಧನ್ಯರು
ಧನ್ಯವಾದಗಳು ಇಂಥ ಒಂದು ಅದ್ಭುತ ವಾದಹಾಡನ್ನು ಸ್ರಷ್ಟಿದ್ದಕ್ಕೇ ನಾವೇ ಧನ್ಯರು
ಈ ಹಾಡು ಬರೆದವರಿಗೆ, ಸಂಗೀತ ಸಂಯೋಜನೆ ಮಾಡಿದವರಿಗೆ, ಹಾಡಿದವರಿಗೆ... ಕೋಟಿ ಧನ್ಯವಾದಗಳು...👌👌👌👌👌🌸🙏🌹🌹
Super 🙏🏻🙏🏻🙏🏻
ಬರೆದವರು ನಮ್ಮ ದಾವಣಗೆರೆ ಯ ಹೆಚ್ ಎಸ್ ವೆಂಕಟೇಶ್ ಮೂರ್ತಿ
ವಾವ್ ಸೂಪರ್ 👌🏽
ಇದು ಪಠ್ಯದ ಭಾಗವಾಗಬೇಕು, ಅರ್ಥಗರ್ಭಿತ ಮತ್ತು ನಿಸ್ವಾರ್ಥತೆಯನ್ನು ಎದೆಯಲ್ಲಿ ಬಿತ್ತುವಂತಿವೆ ಸಾಲುಗಳು
ಅತ್ಯದ್ಭುತ ಗೀತೆ🙏🙏🙏
ಎಷ್ಟು ಬಾರಿ ಕೇಳಿದರೂ ಹೊಸದೇ, ಸ್ಫೂರ್ತಿದಾಯಕ, ನೆಮ್ಮದಿ ನೀಡುವ ಗಾಯನ...
ಸಾವಿರ ಪ್ರಣಾಮಗಳು, ಎಲ್ಲರಿಗೂ 🙏🙏🙏
ಕೆಲವೊಮ್ಮೆ ಇಂತಹ ಹಾಡು ಗಳನ್ನು ಕೇಳುವಾಗ... ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ... ಯಾಕೆಂದರೆ.... ಇರಬೇಕು ಇರುವಂತೆ... ಈ ಸಾಲು ತುಂಬಾ ಅರ್ಥ ಗರ್ಭಿತವಾಗಿದೆ.. ♥️♥️♥️♥️🙏🙏
ಮನಸ್ಸು ರಿಲ್ಯಾಕ್ಸ್ ಆಯ್ತು.. ಮೊದಲ ಭಾರಿ ಈ ಹಾಡು ಕೇಳುತ್ತಿದ್ದೇನೆ... ಸಂಗೀತ ಸಂಯೋಜನೆ, ಸಾಹಿತ್ಯ ಅದ್ಬುತ..🙏🙏🙏
Dvd
ಒಮ್ಮೆ ಕೇಳಿದವರಿಗೆ ಇನ್ನೊಮ್ಮೆ ಕೇಳದೆ ಇರಲಾಗದಂತ ಕೆಲವೇ ಗೀತೆಗಳಲ್ಲಿ ಇದೂ ಒಂದು.
ಇಂಪಾದ ಗಾಯನ ಅಷ್ಟೇ ಅದ್ಭುತವಾದ ಸಾಹಿತ್ಯ
ಅಭಿನಂದನೆಗಳು
ನನಗಂತೂ ಲೆಕ್ಕವೇ ಸಿಗುತ್ತಿಲ್ಲ. ಬಿಡುವು ಸಿಕ್ಕಾಗಲೆಲ್ಲಾ ಏಕ ಚಿತ್ತದಿಂದ ಕುಳಿತು ಕೇಳುವುದೊಂದೇ ನನ್ನ ಪರಿಪಾಠವಾಗಿ ಬಿಟ್ಟಿದೆ. ಈ ಹಾಡಿನ ಮೋಡಿಯೇ ಹಾಗಿದೆ. ರಾಘವೇಂದ್ರ ಬೀಜಾಡಿಯವರಿಗೆ ಎಷ್ಟು ಅಭಿನಂದನೆ ಹೇಳಿದರೂ ಕಡಿಮೆ ಎನಿಸುತ್ತದೆ. ❤
ಭಾಷೆಯ ಹಿರಿಮೆ ಹೆಚ್ಚಿಸುವ ಸಾಹಿತ್ಯ...ಸಾಹಿತ್ಯಕ್ಕೆ ನಿಜ ಭಾವ ತುಂಬುವ ಸಂಗೀತ ಗಾಯನ ....ಧನ್ಯೋಸ್ಮಿ.🙏🙏
ಮತ್ತೆ ಮತ್ತೆ ಕೇಳಬೇಕು ಎನಿಸುವ ಗೀತೆ..... ಪ್ರತಿ ಬಾರಿ ಕೇಳಿದಾಗಲೂ ಅದೇ ತನ್ಮಯ ಭಾವ.... ರಾಘಣ್ಣನ ಧ್ವನಿ ಅದ್ಭುತ.....
ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳ ಬೇಕೆನ್ನುವ ಹಂಬಲ❤❤❤❤
Hi
ದಿನಕ್ಕೆ 5-8 ಸಲ ನಾದ್ರು ಕೇಳತಾಇರ್ತೀನಿ ತುಂಬಾ ಅದ್ಭುತ ಒಳ್ಳೆ ಸಾರಾಂಶ. ಅರ್ಥ ಗರ್ಭಿತ. ಏನ್ ಹೇಳೋದು ಅಷ್ಟ್ ಸುಂದರವಾಗಿದೆ ನಾವು ಕೂಡ ಈಗೇ ಇರಬೇಕು ಅಲ್ವಾ
ನೀರಲ್ಲಿ ಮಂಜು ಕರಗಿದಂತೆ ಈ ಸಾಹಿತ್ಯದಲ್ಲಿ ಮನಸು ಕರಗಿತು.....🙏
💞💞
ಸುಮಧುರವಾಗಿದೆ ರಾಘವೇಂದ್ರ ಬಿಜಾಡಿಯವರ ಗಾಯನ ಮತ್ತು ಸಂಗೀತ.
ಹೆಚ್ ಎಸ್ ವಿ ಯವರ ಸಾಹಿತ್ಯ ಅದ್ಭುತ.
ಸಮೀರ್ ರವರ ಕೊಳಲ ಮಾಧುರ್ಯ ಅದ್ಭುತ..
👌👍💐💐💗🙏
1a111
👌
@@veerendrapatil3005 pp
Super
Good super
ತುಂಬಾ ಮಾರ್ಮಿಕವಾಗಿ ಹೇಳಿದ ಪದಗಳು ಇವು. ಥ್ಯಾಂಕ್ಸ್ Sir
ಮಳೆ ಸುರಿಸಿ ಅಗುರಾದ ಮುಗಿಲಿನಂತೆ. ಎಂತಹ ಅದ್ಭುತವಾದ ಸಾಲುಗಳು ಮತ್ತೆ ಮತ್ತೆ ಕೇಳಬೇಕೆ ಎನ್ನುವ ಆಸೆ, 👌🙏.
ఈ జన్మ ధన్యం అయింది నాకు ఈ పాట అంత మధురంగా వుంది. పాడినవాలకి నా పాదాభివందనాలు 🙏🙏🙏🙏🙏🙏🙏
ಲಾವಣ್ಯರವರೆ...ನಿಮಗೆ ತುಂಬು ಹೃದಯದ ಧನ್ಯವಾದಗಳು.ಕವಿತೆಯ ಭಾವನೆಗೆ ಸ್ಪಂದಿಸಿದ್ದಕ್ಕೆ...
😊
Theluguvalu kannadavalu grateful but me mata super
Well net meaningful songs will steal our hearts even if they are not understood fully .... Power of music is unlimited.
ನಿಮಗೆಲ್ಲರಿಗೂ ದೊಡ್ಡ ನಮನಗಳು ಎಂಥ ಅರ್ಥ ಇದೆ ಸರ್ ಇದ್ರಲ್ಲಿ ನಾನು ಯಾವುದೇ ವಿಷಯ ಆದ್ರೂ ತುಂಬಾ ಚಿಂತೆ ಮಾಡ್ತಾ ಇದ್ದೆ ಸರ್ ಈ ಹಾಡು ಕೇಳಿದ ಮೇಲೆ ಮನಸ್ಸು ತುಂಬಾನೇ ರಿಲೇಕ್ಸ್ ಅಯ್ತು ಸರ್ ನಿಮಗೆಲ್ಲರಿಗೂ ಮತ್ಹೋಮ್ಮೆ ತುಂಬು ಹೃದಯದ ಧನ್ಯವಾದಗಳು ಇಂಥ ಹಾಡನ್ನು ಬರೆದಿದ್ದಕ್ಕೆ 🙏🙏🙏🙏🙏
ನಿಮ್ಮ ಕಂಠ ಸಿರಿಯಲ್ಲಿ ಅದ್ಭುತವಾಗಿ ಮೂಡಿ ಬಂದಿದೆ ಸರ್. ತುಂಬಾ ಮಧುರವಾಗಿ ಭಾವಪೂರ್ಣವಾಗಿ ಹಾಡಿದ್ದೀರ.👌👌👌🐰 Tq. Sir🙏🙏
ಎಚ್ ಎಸ್ ವಿ ಅವರ ಸಾಹಿತ್ಯ , ನಿಮ್ಮ ಧ್ವನಿ ಮತ್ತು ಸಂಗೀತದ ಮೂಲಕ ನಮ್ಮೆಲ್ಲರ ಹೃದಯದ ಬಾಗಿಲು ತೆರೆಯುತ್ತದೆ, ತೆರೆಯುವಾಗ ಕಣ್ಣು ಒದ್ದೆಯಾಗುತ್ತದೆ. 🙏🌺
ಈ ಹಾಡನ್ನು ಮತ್ತೆಮತ್ತೆ ಕೇಳಬೇಕು ಅಂತ ಯೂಟ್ಯೂಬ್ ನಲ್ಲಿ ಹುಡುಕುತ್ತಿದ್ದೆ ಸರ್. ಸಿಕ್ಕಿರಲಿಲ್ಲ.
ಯಾವಾಗಲೂ ಪೇಸ್ ಬುಕ್ ನಲ್ಲಿ ಕೇಳುತ್ತಿದ್ದೆ. ಅದೆಷ್ಟೋ ಸರಿ ಕೇಳಿರುವೇನೊ ನನಗೆ ಲೆಕ್ಕ ಸಿಗುತ್ತಿಲ್ಲ.
ಅಂತು ಇವತ್ತು ಶಿವರಾತ್ರಿ ಸಾರ್ಥಕವಾಯ್ತು. ಮತ್ತೆ ನಿಮ್ಮ ದನಿಯಲ್ಲಿ ಕೇಳುವ ಅವಕಾಶ ಒದಗಿಸಿದ ಆ ಶಿವ.
ಕವಿಗಳಿಗೆ, ಗಾಯಕರಿಗೆ ನನ್ನ ನೂರೊಂದು ಪ್ರಣಾಮಗಳು. 🙏🙏
ನೆನ್ನೆ ರಾತ್ರಿ ಮೊದಲ ಬಾರಿಗೆ ಈ ಹಾಡು ಕೇಳಿದೆ. ಆಗಿನಿಂದ ಕಡಿಮೆ ಅಂದರೂ ಬಹುಶಃ ಒಂದು 15 ಬಾರಿಯಾದರೂ ಕೇಳಿರಬಹುದು .. ಈ ಒಂದೇ ಹಾಡು ಸಾಕಾಯಿತು ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಅಭಿಮಾನಿಯಾಗಲು. ಅವರ 'ಲೋಕದ ಕಣ್ಣಿಗೆ ರಾಧೆಯು ಕೂಡ ' ಹಾಡನ್ನು ಮೊದಲು ಗುನುಗುತ್ತಿದ್ದೆ ಆದರೆ ಈ ಹಾಡು ನನ್ನನ್ನು ಮರುಳು ಮಾಡಿತು. ❤️❤️
ಈ ಹಾಡು ಕೇಳಿದಾಗೆಲ್ಲಾ ಏನೋ ಮನದಲ್ಲಿ ಶಾಂತಿ, ಹಗುರ, ಸಮಾಧಾನ ಸಿಗುವುದು.🙏👌
ಎಷ್ಟು ಬಾರಿ ಕೇಳಿದ್ದೇನೆ ಎಂದು ಲೆಕ್ಕವಿಡಲು ಸಾದ್ಯವಿಲ್ಲ... ಕಾರಣ ಪ್ರತಿಬಾರಿ ಕೇಳುವಾಗಲೂ ಹೊಸ ಚೈತನ್ಯ ತುಂಬುತ್ತಿದೆ.
ಅಮೋಘ ರತ್ನಮಾಲೆಯಂತಹ ಹಾಡು ಹಾಡಿನಲ್ಲಿ ಬರುವ ಪ್ರತಿಯೊಂದು ಪದವೂ ಮೈ ಝುಮ್ಮೆನಿಸುವಂತಹದು ಗಾಯನವಂತೂ🙏
ಸುಂದರವಾದ ಹಾಡು ಮತ್ತೆ ಮತ್ತೆ ಕೇಳುತ್ತಿರಬೇಕು ಅನಿಸುತ್ತದೆ. ನೊಂದ ಮನಸ್ಸಿಗೆ ಮುದ ನೀಡುವ ಪದಗಳ ಜೋಡಣೆ ಅದ್ಭುತ. ಸಂಗೀತ ಇಂಪನ್ನು ನೀಡಿ ಮನಸ್ಸಿಗೆ ಮೋದವನ್ನು ನೀಡುತ್ತದೆ
ಅರ್ಥ ಗರ್ಭಿತವಾದ್ ಸುಂದರ ಹಾಡು.ರಚಣೆಕಾರರಿಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏💐💐
Tumba sundaravada komalavada arthagarbhitavada sharanagata bhavada haafu. Thank you very mucch H S V sir
ಕೇಳಿದ ಮೊದಲಬಾರಿಗೆ ಇದರರ್ಥ ಮನ ಮುಟ್ಟಿತು... ಎಂತಹ ಸಾಹಿತ್ಯ ಇಂತಹ ಗಾಯನ 👏👏
ಬದುಕು ಸಾಕು ಎನ್ನಿಸಿದಾಗ ಈ ಹಾಡು ಕೇಳಿಸಿದರೆ ಅದುವೇ ಸಂಜೀವಿನಿ ಯಾಗಿ ಕೆಲಸ ಮಾಡುವುದು....ಧನ್ಯವಾದ... ಅದ್ಭುತ ರಚನೆ
ತುಂಬಾ ಅಮೋಘವಾದ ಸಂಗೀತ,ಸಾಹಿತ್ಯ,ಗಾಯನ.ನಿಮಗಿದೋ ನನ್ನ ಅನಂತ ಅನಂತ ವಂದನೆಗಳು.
ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವಂತಹ ಅರ್ಥಪೂರ್ಣ ಸಾಹಿತ್ಯ ಮತ್ತು ಗಾಯನ👌👌
ಎಂಥಹ ಸಾಹಿತ್ಶ ಎಂಥಾ ರಾಗ ಸಂಯೋಜನೆ ! ಎಂಥಾಧ್ವನಿ ! ತುಂಬಾ ಧನ್ಶವಾಯಿತು ನನ್ನ ಜೀವ !
ಇದೇ ಮೊದಲ ಬಾರಿ ನಾನು ಕೇಳ್ತಾ ಇರೋದು, ಅದ್ಭುತ ಸಾಹಿತ್ಯ ಮತ್ತು ಗಾಯನ,,ನಾ ಕೇಳಿದ ಅದ್ಬುತ ಹಾಡುಗಳಲ್ಲಿ ಇದು ಕೂಡ ಒಂದು 🙏🙏❤️❤️
ಅಧ್ಬುತ ಸಾಹಿತ್ಯ ಅತ್ಯದ್ಭುತ ಗಾಯನ👏👏
ಅರ್ಥಗರ್ಭಿತ ಸಾಹಿತ್ಯ . ಮನಸಿಗೆ ಶಾಂತಿ ಉಂಟು ಮಾಡುವ ಗಾಯನ. ಸಾಗರದಲ್ಲಿ ಒಮ್ಮೆ ಮಕ್ಕಳ ಕಲೋತ್ಸವ ಸಮಾರೋಪ ಸಮಾರಂಭದಲ್ಲಿ ನಿಮ್ಮ ಪ್ರಾರ್ಥನೆ ಅದ್ಭುತ.ಆಗಿಂದ ನಿಮ್ಮ ಅಭಿಮಾನಿ. 🙏
Athyadbhootha Haadu 👌👌👌👌,
Saahitya hagu haadugaranigondu salaam
ಅಧ್ಬುತವಾದ ಹಾಡು ಮನಸ್ಸು ಹಗುರಾಯಿತು,ಹೃದಯ ಕುಣಿಯಿತು,ಧನ್ಯವಾದಗಳು ಸಂಗೀತ ಬಳಗಕ್ಕೆ💐💐💐
ಈ ಹಾಡು ಕೇಳಿದಾಗಲೆಲ್ಲ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಅಷ್ಟೊಂದು ಅದ್ಭುತವಾಗಿ ಮೂಡಿ ಬಂದಿದೆ ಈ ಹಾಡು ರಾಘವೇಂದ್ರ ಬೀಜಾಡಿ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು
ತು೦ಬಾ ಖುಷಿಯಾಗುತ್ತೆ ನನ್ನ ಊರಿನವರು ಎಂದು😍
ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವಷ್ಟು ಸೊಗಸಾಗಿ ಹಾಡಿದ್ದೀರ ಗುರುಗಳೇ ಸಾಹಿತ್ಯದಂತೆ,,
👏👏👌👌❤️❤️🌹🌹🙏🙏
ಸಾವಿರ ಶರಣು 🙏🏻🙏🏻🙏🏻🙏🏻🙏🏻🙏🏻 ಕಣ್ಮುಚ್ಚಿ ಕೇಳುತ್ತಿದ್ದರೆ ನಾವೇ ನೀಲಿಯಾಗಸದಲ್ಲೋ ಸಾಗರದಲ್ಲೋ ತೇಲಿದಂತೆ.... ಎಲ್ಲಾ ಭಾವ ಬಂಧನಗಳಿಂದ ಮುಕ್ತವಾದಂತೆ ಭಾಸವಾಗುತ್ತೆ...
Tumba channagede hadu
ಕಸ್ತೂರಿ ಕನ್ನಡಕ್ಕೆ ಜೀವದುಂಬುವ ಕನ್ನಡದ ಕವಿಗಳಿಗೆ ಶರಣು ಶರಣು,,,,,,.
ಅತ್ಯುತ್ತಮ ಸಾಹಿತ್ಯ ಸಂಗೀತ ಹಾಗೂ ಗಾಯನ.
ಸುಮಧುರ ಸಂಗೀತ ಸುಮಧುರ ಸಾಹಿತ್ಯ ಅರ್ಥ ಪೂರ್ಣವಾದ ಮನಸು ಮೆಚ್ಚುಗೆ ಇರುವ ಹಾಡು....
ಅದ್ಬುತ ಸಾಹಿತ್ಯ ,ಅದ್ಬುತವಾದ ಸಂಯೋಜನೆ,ಮನಸ್ಸಿನ ದುಗುಡ ದೂರವಾಗುವ ಅನುಭವ
ಅತ್ಯದ್ಭುತವಾದ ಸಾಹಿತ್ಯ ಹಾಗೂ ಗಾಯನ. ಮತ್ತೆ ಮತ್ತೆ ಕೇಳುವಂತಾಗಿದೆ
ನಾನು 5 ತಿಂಗಳಿನಿಂದ ಪ್ರತಿದಿನವೂ ಈ ಹಾಡು ಕೇಳಿದ್ದೇನೆ,ಕೇಳುತ್ತಿದ್ದೇನೆ......ಪ್ರತಿ ಕೇಳುವಿಕೆಯೂ ನವನವೀನ ಭಾವ
Entaa bhavanega anaavarana namma kannadadalli maatra antanisutte nanage❤❤❤
H S V ಯವರ ಅದ್ಭುತವಾದ ಸಾಹಿತ್ಯಕ್ಕೆ ಅಷ್ಟೇ ಉತ್ತಮವಾದ ಮಾಧುರ್ಯ ತುಂಬಿದ ಗಾಯನವನ್ನು ನೀಡಿದ ರಾಘವೇಂದ್ರರವರಿಗೆ ಅಭಿನಂದನೆಗಳು 🌹🌹🌹🙏🙏🙏🙏🙏
ಎಂತಹ ಸಾಹಿತ್ಯ ಎಂತಹ ಗಾಯನ ನಿಜಕ್ಕೂ ಅದ್ಭುತ ಅಮೋಘ ❤️❤️
ಅತ್ಯದ್ಭುತ ಹಾಡು.ನಿಜಕ್ಕೂ ಈ ಹಾಡು ಕೇಳಿದವರ ಮನಸ್ಸು ಮಳೆ ಸುರಿಸಿ ಹಗುರಾದ ಮುಗಿಲಿನಂತಾಗುವುದು ಖಂಡಿತ. 🙏🙏💐💐
ಇಂಥ ಪ್ರತಿಭೆಗಳು ಮತ್ತೆ ಮತ್ತೆ ಹುಟ್ಟಿ ಕನ್ನಡವನ್ನು ಕನ್ನಡಿಗ ರನ್ನು ಶ್ರೀಮಂತ ಗೊಳಿಸಲು ಗುರುವಿನಲ್ಲಿ ಮನವಿ 🙏🙏🙏🙏🙏
ಮಳೆ ಸುರಿಸಿ ಹಗುರದ ಮುಗಿಲಿನಂತೆ, ನನ್ನ ಮನಸು ಹಗುರಗುತ್ತದೆ, ಈ ಹಾಡು ಕೇಳಿದಾಗ ಈ ಹಾಡನ್ನು ನಾನು ಕಮ್ಮಿ ಕೇಳಿಲ್ಲ ಲೆಕ್ಕವಿಲ್ಲ ದೋಷ್ಟು ಸಲ 🌹🙏🙏🙏
ಒಂದೊಂದು ಪದಗಳು ಸಹ ಮುತ್ತಿನಂತಹ ಜೋಡಣೆ... ಅರ್ಥಪೂರ್ಣವಾದ ಗೀತೆ..❤
ಬದುಕಿನ ಬವಣೆಯನ್ನು ಹಗುರವಾಗಿಸುತ್ತದೆ ಈ ಹಾಡು,,ಓ ಕವಿಯೇ, ನಿನ್ನ ಭಾವಪ್ರಪಂಚಕ್ಕೊಂದು ಸಲಾಂ.
ಮನಮುಟ್ಟುವ ಸಾಲುಗಳು
ಮನ ತಟ್ಟುವ ಸಂಗೀತ
ಕಣ್ಣಿನಲ್ಲಿ ನೀರು ತರುವುದು ನಿಜಸಹಜ🥺🙏