ಹೊಸ ವರ್ಷದ ’ಜೋಷ್’ - ಜೋಶಿಯೊಂದಿಗೆ...
Вставка
- Опубліковано 30 гру 2022
- ವಿವಿಧಭಾರತಿ - ಆಕಾಶವಾಣಿ ಬೆಂಗಳೂರು ಕೇಂದ್ರದ ವಾಣಿಜ್ಯ ವಿಭಾಗದಿಂದ 1 ಜನವರಿ 2023ರಂದು ಬೆಳಗ್ಗೆ 8ರಿಂದ 9ರವರೆಗೆ ಪ್ರಸಾರವಾದ ಸಂದರ್ಶನ.
ನವೆಂಬರ್ 4, 2022ರಂದು ನಾನು ಬೆಂಗಳೂರಿನಲ್ಲಿದ್ದಾಗ ಇದರ ಧ್ವನಿಮುದ್ರಣ ಆಗಿತ್ತು. ಬೆಂಗಳೂರು ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ ಮತ್ತು ವಿವಿಧಭಾರತಿ ಕೇಂದ್ರದ ಪ್ರಸಕ್ತ ಪ್ರಸಾರಾಧಿಕಾರಿ ಕಾನ್ಸೆಪ್ಟಾ ಫೆರ್ನಾಂಡಿಸ್ ಅವರು ಈ ಸಂದರ್ಶನವನ್ನು ನಡೆಸಿಕೊಟ್ಟರು.
ಬಹಳ ಅಚ್ಚುಕಟ್ಟಾದ ಕಾರ್ಯಕ್ರಮ. ಬಹಳ ಚೆನ್ನಾಗಿತ್ತು !!👏👏👏
ಜೋಶಿ ಸರ್ ನಮಸ್ತೆ ನಾನು ನಿಮ್ಮ ಪರಾಗಸ್ಪರ್ಶ ಅಂಕಣದ ದೊಡ್ಡ ಅಭಿಮಾನಿ ಅಷ್ಟು ಅಂಕಣಗಳನ್ನು ಪುಸ್ತಕ ರೂಪದಲ್ಲಿ ಹೊರತನ್ನಿ ಸರ್ ಅವುಗಳನ್ನು ಓದಲು ನಾನು ತುಂಬಾ ಉತ್ಸುಕನಾಗಿದ್ದೇನೆ..
ನಿಮ್ಮ ಒಂದು ಅಂಕಣ ಓದಿ ನನಗೆ ಒಂದು ಕ್ಷಣ ಮೈಮನ ರೋಮಾಂಚನವಾಗಿತ್ತು
ಆ ಅಂಕಣದ ಹೆಸರು.
ಮತ್ತು ಮತ್ತೂ ಮನಸ್ಸಲ್ಲಿಳಿಯುವ ಮತ್ತೂರಜ್ಜ...
ಮತ್ತೂರು ಕೃಷ್ಣಮೂರ್ತಿ ಅವರು ವಿಧಿವಶರಾದಗ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನೀವು ಬರೆದ ಅಂಕಣ
ಅದನ್ನು ಓದಿ ನನ್ನ ಮೈಮನ ಪುಳಕಿತಗೊಂಡಿತು....🙏🙏💐💐
ಅಪರೂಪದ ಕಾರ್ಯಕ್ರಮ, ಹೊಸ ವರುಷವನ್ನು ಸ್ವಾಗತಿಸಿದ ರೀತಿ ತುಂಬಾ ಸುಂದರ
ತುಂಬಾ ಚೆನ್ನಾಗಿ ಮೂಡಿ ಬಂದಿದೆ SJ👌👌Thanks for sharing🙏reminded me of my Akashvani interview with Smt Malathi Sharma in 2005🙏🙏
ಆತ್ಮೀಯ ಮಾತುಗಳು. ಸುಂದರವಾದ ಸಂದರ್ಶನ.
ಒಳ್ಳೆಯ ಲೇಖಕ ಮಾತ್ರವಲ್ಲ ಒಳ್ಳೆಯ ಮನುಷ್ಯನೂ ಹೌದು ಎಂದು ಗೊತ್ತಾಗುತ್ತದೆ ಈ ಸಂದರ್ಶನದಲ್ಲಿ. "ಏನಾದರೂ ಆಗು. ಮೊದಲು ಮಾನವನಾಗು "!
ನಮ್ಮ ಬಾಲ್ಯದ ನೆನಪಾಯ್ತು... 👌👍
ಹೊಸ ಆಂಗ್ಲ ವರ್ಷಕ್ಕೆ ಬೆಂಗಳೂರು ಆಕಾಶವಾಣಿಯು ನಮ್ಮ ಪ್ರೀತಿಯ' ತಿಳಿರು ತೋರಣ' ಅಂಕಣಗಾರರಾದ
ಶ್ರೀ ವತ್ಸ ಜೋಷಿ ಯವರೊಂದಿಗೆ ಸಂದರ್ಶನ ನಡೆಸಿ ಅನೇಕ ವಿಷಯ ಗಳನ್ನು ಟಚ್ ಮಾಡುತ್ತಾ
ನಮ್ಮೆಲ್ಲರಿಗೆ ರಸಭರಿತ ಚಲನಚಿತ್ರ ಗೀತೆಗಳನ್ನೂ ಸಹ ಕೇಳಿಸಿದ್ದಕ್ಕೆ ಅನಂತ ಧನ್ಯವಾದಗಳು.🙏😊
ಬಹಳ ಖುಷಿ ಆಯಿತು.
ಹಾಡುಗಳೊಡನೆ ಹೆಣೆದ ಸಂಭಾಷಣೆ ಕೇಳಲು ಹಿತವಾಗಿದೆ .
ಬಾಲ್ಯದ, ರೇಡಿಯೋ ಕೇಳುತ್ತ ಕಳೆದ ಮಧುರ ನೆನಪುಗಳು ಮರುಕಳಿಸಿ 2023ದ ಮೊದಲ ದಿನ ಸ್ಮರಣೀಯವಾಯಿತು.
Super
ಸಾರ್ಥಕ ಸಂದರ್ಶನ. ಸುಮತಿಯವರ ಸುಮಧುರ ಸ್ವರದೊಂದಿಗೆ ಜೋಶಿಯವರ ಯಶೋಗಾಥೆಯ ಅಶರೀರವಾಣಿ. ಕೇಳಿ ತುಂಬಾ ಸಂತೋಷವಾಯಿತು.🙏🙏
ಪ್ರಶ್ನೆಗಳು ಚುಟುಕಾಗಿ ಚುರುಕಾಗಿ ಇದ್ದರೆ ಚೆನ್ನ, ಅತಿಥಿಗಳಿಗೆ ಹೆಚ್ಚು ಮಾತನಾಡಲು ಅವಕಾಶವಿರಬೇಕು