Renukaswamy ಕೊಲೆ ಬಗ್ಗೆ ಇಲ್ಲಿಯವರೆಗೆ ನಡೆದ ಪ್ರಮುಖ ಘಟನಾವಳಿಗಳಿವು | Vijay Karnataka

Поділитися
Вставка
  • Опубліковано 24 чер 2024
  • ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ರೇಣುಕಾ ಸ್ವಾಮಿ ಅಶ್ಲೀಲ ಮೇಸೆಜ್‌ ಕಳುಹಿಸಿದ್ದ ಎಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬರಲಾಯಿತು. ಜೂನ್ 8ರಂದು ಅಲ್ಲಿಯೇ ಆತನ ಮೇಲೆ ತೀವ್ರ ಹಲ್ಲೆ ಮಾಡಲಾಗಿತ್ತು. ನಂತರ ಆತ ಮೃತಪಟ್ಟಿದ್ದ. ಬಳಿಕ ಆತನ ಶವವನ್ನು ಸುಮನಹಳ್ಳಿಯ ರಾಜಾಕಾಲುವೆ ಸಮೀಪ ಎಸೆಯಲಾಗಿತ್ತು. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲನೇ ಆರೋಪಿಯಾದರೆ, ದರ್ಶನ್‌ ಎರಡನೇ ಆರೋಪಿ. ಒಟ್ಟು ಈ ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಲಾಗಿದೆ. ಎಲ್ಲರೂ ಈಗ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾರೆ.
    ಅದು ಭಾನುವಾರ (ಜೂನ್ 9) ಬೆಳ್ಳಂಬೆಳಗ್ಗೆಯ ಸಮಯ. ಸುಮನಹಳ್ಳಿಯ ಸಮೀಪದ ಅಪಾರ್ಟ್‌ಮೆಂಟ್ ಎದುರಿನ ರಾಜಾಕಾಲುವೆ ಪಕ್ಕಾ ರೇಣುಕಾ ಸ್ವಾಮಿ ಶವ ಬಿದ್ದಿತ್ತು, ಅದನ್ನು ನಾಯಿಗಳು ಕಚ್ಚಿ ತಿನ್ನಲು ಆರಂಭಿಸಿದ್ದವು. ಅದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಕಾಮಾಕ್ಷಿಪಾಳ್ಯ ಪೊಲೀಸರಿಂದ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡರು.
    ಜೂನ್ 9ರಂದು ರೇಣುಕಾ ಸ್ವಾಮಿ ಶವ ಪತ್ತೆಯಾದ ಮೇಲೆ ಜೂನ್ 10ರಂದು ಕೆಲವು ಮಂದಿ ಪೊಲೀಸ್ ಠಾಣೆಗೆ ಭೇಟಿ ಆಗಮಿಸಿದರು. "ಹಣದ ವ್ಯವಹಾರದಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ರೇಣುಕಾ ಸ್ವಾಮಿಯನ್ನು ನಾವೇ ಕೊಲೆ ಮಾಡಿದ್ದೇವೆ" ಎಂದು ಪೊಲೀಸರ ಎದುರು ಶರಣಾದರು. ಆದರೆ ಸರೆಂಡರ್ ಆಗಲು ಬಂದವರನ್ನು ಪೊಲೀಸರು ಅಷ್ಟು ಸುಲಭವಾಗಿ ನಂಬಲಿಲ್ಲ. ಪೊಲೀಸ್ ಭಾಷೆಯಲ್ಲಿ ಬಾಯಿಬಿಡಿಸಿದಾಗ ಒಂದೊಂದೇ ವಿಚಾರಗಳು ಹೊರಬಿದ್ದವು. ಈ ಕೇಸ್‌ನಲ್ಲಿ ನಟ ದರ್ಶನ್ ಪಾತ್ರ ಇದೆ ಎಂಬ ಆರೋಪ ಕೇಳಿಬಂತು.
    #renukaswamymurdercase #darshanthoogudeepa #pavithragowda
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • Розваги

КОМЕНТАРІ •