ಗಮಕ : ಕರ್ಣಭೇದನ (ಕುಮಾರವ್ಯಾಸ ಭಾರತ : ಉದ್ಯೋಗ ಪರ್ವ - ೧೦ನೇ ಸಂಧಿ) | Kumaravyasa Bharata Udyoga Parva 10
Вставка
- Опубліковано 22 чер 2018
- ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ yt.orcsnet.com/#ruthumana
ಕರ್ಣಭೇದನವು ಹಲವು ಕಾರಣಗಳಿಗೆ ಪ್ರಸಿದ್ದವಾದ ಪ್ರಸಂಗ. ಯಕ್ಷಗಾನ ತಾಳಮದ್ದಳೆಯಾಗಿಯೂ ಹೆಸರು ಮಾಡಿರುವ ಪ್ರಸಂಗವಿದು . ಕುಮಾರವ್ಯಾಸನ ಉದ್ಯೋಗಪರ್ವದಲ್ಲಿ ಹತ್ತನೇ ಸಂಧಿಯಲ್ಲಿ ಇದು ಬರುತ್ತದೆ . ಕೃಷ್ಣನ ರಾಜಕೀಯದ ಪಟ್ಟುಗಳು, ಕರ್ಣನನ್ನು ಭಾವನೆಯ ಬಲೆಯಲ್ಲಿ ಬಂಧಿಸಿ ಅವನ ಸ್ವಾಮಿನಿಷ್ಠೆಯನ್ನು ಪರೀಕ್ಷಿಸುವುದು ಎಲ್ಲ ಅತ್ಯಂತ ನಾಟಕೀಯವಾಗಿದೆ. ಸಂಧಾನಕ್ಕೆಂದು ಹೋಗಿದ್ದ ಕೃಷ್ಣ ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರನಡೆದ ಮೇಲೆ ಘಟಿಸುವ ಘಟನೆಯಿದು. ಕರ್ಣನನ್ನು ಏಕಾಂತಕ್ಕೆ ಕರೆದುಕೊಂಡುಹೋಗಿ, ಅವನ ಹುಟ್ಟಿನ ವಿವರಗಳನ್ನು ಅವನಿಗೆ ತಿಳಿಸಿ, ಅವನನ್ನು ಒಲಿಸಿಕೊಳ್ಳುವ ಪ್ರಯತ್ನವೇ ಈ ಪ್ರಸಂಗದ ತಿರುಳು.
ಕುಮಾರವ್ಯಾಸನ ಕೃಷ್ಣನಂತೂ ನುರಿತ ಮನೋವಿಜ್ಞಾನಿಯಂತೆ, ಪಳಗಿದ ಸೇಲ್ಸ್ ಮ್ಯಾನ್ ಒಬ್ಬನಂತೆ ಆಕರ್ಷಕವಾದ ಮಾತು, ನಡೆಗಳ ಮೂಲಕ ಕರ್ಣನನ್ನು ಒಳಗೊಳಗೇ ಕುಸಿಯುವಂತೆ ಮಾಡುತ್ತಾನೆ. ಕುಮಾರವ್ಯಾಸನ ಕೃಷ್ಣನು ಇನತನೂಜನಕೂಡೆ ಮೈದುನತನದ ಸರಸವನೆಸಗಿ ವಿಷಯ ಶುರುಮಾಡುತ್ತಾನೆ. (ಶತ್ರುಪಾಳಯದವನಾದ ಕರ್ಣ ಕುಂತಿಯ ಮಗನಾಗಿದ್ದದ್ದು ಇಷ್ಟು ದಿನ ನೆನಪಿಗೆ ಬರದೇ ಈಗ ಬರುತ್ತದೆ, ಕುಂತಿ ಕೃಷ್ಣನ ಅತ್ತೆ, ಅಂದಮೇಲೆ ಕರ್ಣ ಭಾವಮೈದುನನಾಗಬೇಕಲ್ಲ) ಯಾದವ ಕುಲತಿಲಕನಾದ ಕೃಷ್ಣ ಸೂತಪುತ್ರನಾದ ಕರ್ಣನನ್ನು ಬರಸೆಳೆದು, ತೊಡೆ ಸೋಂಕಿನಲಿ ಕುಳ್ಳಿರಿಸಿ ತಬ್ಬಿಬ್ಬಾಗಿಸುತ್ತಾನೆ. ಅವನ ಕರದೊಳು ಕರತಳವನಿಕ್ಕಿ, ನಿನ್ನಯ ಕುಲವನರಿ, ವೃಥಾ ಸೇವಕತನದಲಿ ಇಹುದು ಉಚಿತವಲ್ಲ ಅಂತ ಅವನ ಹಿತೈಷಿಯಂತೆ ಮಾತಾಡುತ್ತಾನೆ.
ಕರ್ಣ ಮನಸ್ಸು ಮಾಡಿದರೆ, ಕುರುಕ್ಷೇತ್ರ ಯುದ್ಧವೇ ನಡೆಯುವುದಿಲ್ಲ. ಆಗ ಹಿರಿಯನಾದ ಕರ್ಣನಿಗೆ ಪಟ್ಟಕಟ್ಟಿ ಕೌರವ ಪಾಂಡವ ಮತ್ತಿತರರು ಒಟ್ಟಿಗೇ ಕೂತರೆ ಆ ಚಿತ್ರ ಹೇಗಿರುತ್ತದೆ? "ಎಡದ ಮೈಯಲಿ ಕೌರವೇಂದ್ರರ ಗಡಣ. ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳು !" ಅಂತ ಆಮಿಷ ಒಡ್ಡುತ್ತಾನೆ. "ಒಪ್ಪುವ ಕಡುವಿಲಾಸವ ಬಿಸುಟು, ಕುರುಪತಿ ನುಡಿಸೆ,ಜೀಯ ಹಸಾದವೆಂಬುದು ಕಷ್ಟ ನಿನಗೆ !" ಅಂತ ಒಗ್ಗರಣೆ ಹಾಕುತ್ತಾನೆ.
ಈ ತಂತ್ರಗಾರಿಕೆಗೆ ಕರ್ಣನ ಕೊರಳ ಸೆರೆ ಹಿಗ್ಗುತ್ತದೆ, ದೃಗುಜಲ ಉರವಣಿಸುತ್ತದೆ, ಅವನು ಕಡುನೊಂದನು ಅನ್ನುತ್ತಾನೆ ಕವಿ. ಕರ್ಣನೇನು ಕೃಷ್ಣನ ಜಾಣ್ಮೆಯ ಅರಿವಾಗದಷ್ಟು ದಡ್ಡನಲ್ಲ. ಹೀಗಾಗಿ ಭೇದದಲಿ ಹೊಕ್ಕಿರಿದನೋ ಮಧುಸೂದನನು, ನೀನು ಕೌರವೇಂದ್ರನ ಕೊಂದೆ ಅಂತೆಲ್ಲ ಹೇಳಿ ತಾನೇಕೆ ಕೌರವಪಕ್ಷವನ್ನು ತೊರೆಯಲಾರೆ ಅಂತ ಹೇಳುವುದನ್ನು ಕುಮಾರವ್ಯಾಸ ಸೊಗಸಾಗಿ ಚಿತ್ರಿಸಿದ್ದಾನೆ.
ಧನ್ಯವಾದಗಳು ಮಹಾತ್ಮರಿಗೆ
♥️
@@rohitharam1384 hello sir
🙂🙂🙂
ತಮ್ಮದು ಅಧ್ಭುತ ಕಂಠಸಿರಿ. ಸುಶ್ರಾವ್ಯವಾಗಿ ಗಮಕ ವಾಚನ ಮಾಡಿದಿರಿ 👏👏👏👏
ಎಂಥ ಬಾವ 👌👌👏👏👏
how wonderful it is to listen Gadugina Bharata in Gamaka ... MESMARIZING !! Thanks for uploading ..
Ahaaaa
ತುಂಬಾ ಚೆನ್ನಾಗಿ ಹಾಡಿದ್ದೀರಾ
ಈ ಸುಖವೆ ಸುಖ
ಧನ್ಯವಾದಗಳು ಸರ್.... 🙏🙏🙏
ನೀವೊಬ್ಬ ಅದ್ಭುತ ಗಮಕ ಗಾಯಕರು....
ನನ್ನ ನೆಚ್ಚಿನ .... ಗಮಕ ಗಾಯಕ
ಕೇಳುವಾಗ ತುಂಬಾ ಖುಷಿಯಾಗುತ್ತೆ ,ನಮ್ಮ ಅನಂತಾಚಾರ್ಯರು ನೆನಪಾದರು
ಭಾವಪೂರ್ಣ ಗಮಕ ಬಹಳ ಸೊಗಸಾಗಿದೆ.
Great voice, really amazing
ತುಂಬಾ ಚೆನ್ನಾಗಿದೆ ಗುರುಗಳೇ 10ನೇ ತರಗತಿ ಮಕ್ಕಳಿಗೆ ತುಂಬಾ ಅವಶ್ಯಕ ಉಪಯುಕ್ತ
🎉
Namo namaha
What a melodious voice super
Thanks a lot sir PRANAMAMS
ತುಂಬಾ ಸುಶ್ರಾವ್ಯವಾಗಿದೆ. ಕೇಳಲು ತುಂಬಾ ಖುಷಿ ಆಗುತ್ತದೆ. ಧನ್ಯವಾದಗಳು ಸರ್👌🙏
ಧನ್ಯವಾದಗಳು 🙏ತುಂಬಾ ಸುಂದರವಾಗಿ ಕರ್ಣಮಧುರವಾದ ಗಮಕವಾಚನ. 👌👌👌
ನಿಮಗೆ ನಮೋ ನಮಃ
Unbelievable, Awesome not sure who else we will have to render this Gamaka apart from Ruthumana team. My salute.
great salutes your gamaka vachana
Super sir
Hi Ruthuman Team , your are doing great job. request you to record more Gamaka Vachana, . it wil be documented
'ಬೇನೆಯನರಿಯದ ನೀರಸನು ಏಕೆ ಪುಟ್ಟಿಸಿದನೋ ಅಜಭವನು?' ಎನ್ನುತ್ತಾನೆ ರಾಘವಾ೦ಕ, ಹರಿಶ್ಚ೦ದ್ರ ಕಾವ್ಯದಲ್ಲಿ. ಮನಸ್ಸಿನ ಮಲಿನ ತೊಳೆಯ ಬೇಕಾದರೆ ಹರಿಶ್ಚ೦ದ್ರನ ಬವಣೆ, ಕರ್ಣನ ಬಗ್ಗೆ ಕರುಣೆಗಾಗಿ ಹರಿಯುವ ಕಣ್ಣೀರು ಪಾಪನಾಶಿನಿಯೆ. ಕಾವ್ಯ, ಗಾಯನ, ಶಬ್ದ ಪ್ರಪ೦ಚದ ಕರ್ಣಾನ೦ದಕ್ಕೆ ಕೊನೆಯಾಗದೆ, ತನು, ಮನ ದಾಟಿ ಆತ್ಮಾನ೦ದದ ಅನುಭವ. ಯುಗ, ಯುಗ ಗಳ ಅ೦ತರವನ್ನು ನು೦ಗಿ ಶ್ರೀಕೃಷ್ನ, ಕರ್ಣರ ವಿಲಾಪದಲ್ಲಿ ಕರಗಿ ಹೋಗುತ್ತವೆ. ಅನ್ನದಾತ ಸುಖೀಭವ ಎ೦ದಾಗ ನಮ್ಮ ಕೈಬೆರಳುಗಳಿ೦ದ ಪ್ರಾರ೦ಭವಾಗಿ, ಅನ್ನ ಸೃಷ್ಟಿಸಿ ಹೊಟ್ಟೆ ತು೦ಬಿಸುವರ ಪರ೦ಪರೆಗೆ ಎರಡೇ ಶಬ್ದಗಳಲ್ಲಿ ಕೃತಜ್ಞತೆ ಅರ್ಪಿಸುವ ಚಾತುರ್ಯದ ಮು೦ದೆ, ಈ ರಸ ಸಾಗರದಲ್ಲಿ ಈಜಾಡಿಸಿದವರೆಲ್ಲರಿಗೂ ನಮೋ ನಮಃ ಅ೦ದರೆ ಸಾಕೇ? ಜೈ ಜಗದಾ೦ಬೆ, ಶ್ರೀಶಾರದೆ.
Eshtu chennagi gamaka haadiddare. Ivaru yaaru? Please innu upload maadi
ಸರ್ ಸಂಪೂರ್ಣವಾಗಿ ಕುಮಾರವ್ಯಾಸನ 'ಕರ್ಣಾಟ ಭಾರತ ಕಥಾಮಂಜರಿ' upload ಮಾಡಿ
Medhavigalu
Really great sir
Very good gayana
Please make a complete Kumaravyasa Vachana.. Sir....
My humble request...The future needs it...
its there.. Vachana : by him, Vyakyana : SRG . its available in Ghokale Institute, Basavana Gudi, Bengaluru
@@lsreenivasa i want it sir
@@sathishkumar5505 There Is a UA-cam channel GIPA Live . Search There
@@lsreenivasa tq sir
Superb sir
🙏🙏🙏
Great voice
'ಬೇನೆಯನರಿಯದ ನೀರಸನು ಏಕೆ ಪುಟ್ಟಿಸಿದನೋ ಅಜಭವನು?' ಎನ್ನುತ್ತಾನೆ ರಾಘವಾ೦ಕ, ಹರಿಶ್ಚ೦ದ್ರ ಕಾವ್ಯದಲ್ಲಿ. ಮನಸ್ಸಿನ ಮಲಿನ ತೊಳೆಯ ಬೇಕಾದರೆ ಹರಿಶ್ಚ೦ದ್ರನ ಬವಣೆ, ಕರ್ಣನ ಬಗ್ಗೆ ಕರುಣೆಗಾಗಿ ಹರಿಯುವ ಕಣ್ಣೀರು ಪಾಪನಾಶಿನಿಯೆ. ಕಾವ್ಯ, ಗಾಯನ, ಶಬ್ದ ಪ್ರಪ೦ಚದ ಕರ್ಣಾನ೦ದಕ್ಕೆ ಕೊನೆಯಾಗದೆ, ತನು, ಮನ ದಾಟಿ ಆತ್ಮಾನ೦ದದ ಅನುಭವ. ಯುಗ, ಯುಗ ಗಳ ಅ೦ತರವನ್ನು ನು೦ಗಿ ಶ್ರೀಕೃಷ್ನ, ಕರ್ಣರ ವಿಲಾಪದಲ್ಲಿ ಕರಗಿ ಹೋಗುತ್ತವೆ. ಅನ್ನದಾತ ಸುಖೀಭವ ಎ೦ದಾಗ ನಮ್ಮ ಕೈಬೆರಳುಗಳಿ೦ದ ಪ್ರಾರ೦ಭವಾಗಿ, ಅನ್ನ ಸೃಷ್ಟಿಸಿ ಹೊಟ್ಟೆ ತು೦ಬಿಸುವರ ಪರ೦ಪರೆಗೆ ಎರಡೇ ಶಬ್ದಗಳಲ್ಲಿ ಕೃತಜ್ಞತೆ ಅರ್ಪಿಸುವ ಚಾತುರ್ಯದ ಮು೦ದೆ, ಈ ರಸ ಸಾಗರದಲ್ಲಿ ಈಜಾಡಿಸಿದವರೆಲ್ಲರಿಗೂ ನಮೋ ನಮಃ ಅ೦ದರೆ ಸಾಕೇ? ಜೈ ಜಗದಾ೦ಬೆ, ಶ್ರೀಶಾರದೆ.
ಮಹಾತ್ಮರು! ಎಂತಹ ಕಂಠ! ನಮೋನಮಃ.
🙏ಪಂಪ
'ಬೇನೆಯನರಿಯದ ನೀರಸನು ಏಕೆ ಪುಟ್ಟಿಸಿದನೋ ಅಜಭವನು?' ಎನ್ನುತ್ತಾನೆ ರಾಘವಾ೦ಕ, ಹರಿಶ್ಚ೦ದ್ರ ಕಾವ್ಯದಲ್ಲಿ. ಮನಸ್ಸಿನ ಮಲಿನ ತೊಳೆಯ ಬೇಕಾದರೆ ಹರಿಶ್ಚ೦ದ್ರನ ಬವಣೆ, ಕರ್ಣನ ಬಗ್ಗೆ ಕರುಣೆಗಾಗಿ ಹರಿಯುವ ಕಣ್ಣೀರು ಪಾಪನಾಶಿನಿಯೆ. ಕಾವ್ಯ, ಗಾಯನ, ಶಬ್ದ ಪ್ರಪ೦ಚದ ಕರ್ಣಾನ೦ದಕ್ಕೆ ಕೊನೆಯಾಗದೆ, ತನು, ಮನ ದಾಟಿ ಆತ್ಮಾನ೦ದದ ಅನುಭವ. ಯುಗ, ಯುಗ ಗಳ ಅ೦ತರವನ್ನು ನು೦ಗಿ ಶ್ರೀಕೃಷ್ನ, ಕರ್ಣರ ವಿಲಾಪದಲ್ಲಿ ಕರಗಿ ಹೋಗುತ್ತವೆ. ಅನ್ನದಾತ ಸುಖೀಭವ ಎ೦ದಾಗ ನಮ್ಮ ಕೈಬೆರಳುಗಳಿ೦ದ ಪ್ರಾರ೦ಭವಾಗಿ, ಅನ್ನ ಸೃಷ್ಟಿಸಿ ಹೊಟ್ಟೆ ತು೦ಬಿಸುವರ ಪರ೦ಪರೆಗೆ ಎರಡೇ ಶಬ್ದಗಳಲ್ಲಿ ಕೃತಜ್ಞತೆ ಅರ್ಪಿಸುವ ಚಾತುರ್ಯದ ಮು೦ದೆ, ಈ ರಸ ಸಾಗರದಲ್ಲಿ ಈಜಾಡಿಸಿದವರೆಲ್ಲರಿಗೂ ನಮೋ ನಮಃ ಅ೦ದರೆ ಸಾಕೇ? ಜೈ ಜಗದಾ೦ಬೆ, ಶ್ರೀಶಾರದೆ.
@@nanjundarao9543 Sir yenta matu! Nivu Kannada professor uh?
🙏🙏
ಅದ್ಭುತವಾದ ಸುಶ್ರಾವ್ಯವಾಗಿ ಮೂಡಿಬಂದಿದೆ. ಧನ್ಯವಾದಗಳು.. 🙏👍🙏
ಎಷ್ಟು ಮಧುರ ನಿಮ್ಮ ವಾಚನ ಸರ್
Sad, advertising is killing the flow
use brave browser and open youtube in brave browser no add at all
P B srinivas saayale illa
Super sir