7ನೇ ವೇತನ ಆಯೋಗ 40% ಫಿಟ್ಮೆಂಟ್ಗೆ ಸರಕಾರಿ ನೌಕರರ ಸಂಘ ಮನವಿ | Vijay Karnataka
Вставка
- Опубліковано 19 лис 2022
- ಶಿವಮೊಗ್ಗ: ಸರ್ಕಾರ ಏಳನೇ ವೇತನ ಆಯೋಗ ರಚನೆ ಮಾಡಿರುವುದಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಭಿನಂದನೆ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೇತನ ಪರಿಷ್ಕರಣೆ ವೇಳೆ ಶೇ.40 ರಷ್ಟು ಫಿಟ್ ಮೆಂಟ್ ನೀಡಲು ಏಳನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.
ಸರ್ಕಾರಿ ನೌಕರರಿಗೆ ಏಳನೇ ರಾಜ್ಯ ವೇತನ ಆಯೋಗವನ್ನ ರಾಜ್ಯ ಆರ್ಥಿಕ ಇಲಾಖೆ ಹೊರಡಿಸಿದೆ. ವೇತನ ಆಯೋಗವನ್ನ ಮೊದಲು ಐದು ವರ್ಷಗಳಿಗೆ ಘೋಷಣೆ ಮಾಡುತ್ತಿದ್ದರು. ಮೊದಲ ಬಾರಿಗೆ ನಾಲ್ಕು ವರ್ಷ ಏಳು ತಿಂಗಳಿಗೇ ಆಯೋಗ ರಚನೆಯಾಗಿದೆ. ಮೊದಲು ಐದು ವರ್ಷಕ್ಕೆ ಆಯೋಗ ರಚನೆಯಾದರೂ ಅದು ಕಾರ್ಯರೂಪಕ್ಕೆ ಬರಲು ಏಳೆಂಟು ವರ್ಷಗಳೇ ಆಗ್ತಿದ್ದವು. ಮೊದಲ ಸಲ ಸರ್ಕಾರ ಆರೇ ತಿಂಗಳಲ್ಲಿ ಅಯೋಗವನ್ನ ಅನುಮೋದನೆ ಮಾಡಲಿದೆ. 1952 ರಿಂದ ಈ ತನಕ ರಚನೆಯಾದ ಎಲ್ಲಾ ಆಯೋಗಗಳೂ ಸಹ ವಿಳಂಭವಾಗಿ ಜಾರಿಯಾಗಿವೆ. ನೌಕರರಿಗೆ ಸುಧಾರಣೆ, ಮೂಲಸೌಕರ್ಯ, ಹೊಸ ತಂತ್ರಜ್ಞಾನ ಬಳಕೆ ಹಿಂದಿನ ಪೇ ಕಮಿಷನಲ್ಲಿ ಸೇರಿಸಲಾಗಿತ್ತು. ಈ ವೇತನ ಆಯೋಗದಲ್ಲಿ ಅದ್ಯಾವುದನ್ನೂ ಸೇರಿಸಿಲ್ಲ. ಕೇವಲ ಸರ್ಕಾರಿ ನೌಕರರ ವೇತನ, ಭತ್ಯೆ ಹಾಗೂ ಪರಿಷ್ಕರಣೆಗೆ ಮಾತ್ರ ಅವಕಾಶ ನೀಡಲಾಗಿದೆ.
ಸದ್ಯ ಆಡಳಿತ ಸುಧಾರಣೆಗಾಗಿ ಐಎಎಸ್ ಅಧಿಕಾರಿ ವಿಜಯ್ ಭಾಸ್ಕರ್ ಅವರನ್ನು ನೇಮಕ ಮಾಡಿದ್ದಾರೆ. ಅವರಿಗಿನ್ನೂ ಅಧಿಕಾರ ಅವಧಿ ಇದೆ. ಈ ಆಯೋಗದಲ್ಲಿ ಕೇವಲ ನೌಕರರ ವೇತನ ಪರಿಷ್ಕರಣೆ ಅಂಶವನ್ನು ಮಾತ್ರ ಸೇರಿಸಲಾಗಿದೆ. ನನ್ನ ಪ್ರಕಾರ ತುಂಬಾ ಸಮಯ ತೆಗೆದುಕೊಳ್ಳೋದಿಲ್ಲ. ವೇತನ ಆಯೋಗದ ಹೊಸ ಕಚೇರಿ ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದೆ. ಕಚೇರಿಯಲ್ಲಿ ಕೂತು ಯಾವ್ಯಾವ ಕೇಡರ್ಗೆ ಎಷ್ಟು ವೇತನ ಹೆಚ್ಚು ಮಾಡಬೇಕು ಎಂಬುದನ್ನ ಚರ್ಚಿಸುತ್ತಾರೆ. ವೇತನ ಸಮಿತಿಗೆ ನಾವು ಮನವಿ ಮಾಡಿಕೊಳ್ಳಬೇಕಾಗುತ್ತೆ. ಇಲಾಖಾವಾರು ಮುಖ್ಯಸ್ಥರೂ ಕೂಡ ಇರ್ತಾರೆ. ಎಲ್ಲರೂ ಸೇರಿ ಇವತ್ತಿನ ಆರ್ಥಿಕ ಸ್ಥಿಗೆ ಅನುಗುಣವಾಗಿ ಎಷ್ಟು ಪ್ರತಿಶತ ಫಿಟ್ ಮೆಂಟ್ ( ಫಿಟ್ ಮೆಂಟ್ ಫ್ಯಾಕ್ಟರ್ ) ನೀಡಬೇಕು ಎಂಬುದನ್ನ ಚರ್ಚಿಸುತ್ತಾರೆ. ಈ ಎಲ್ಲಾ ಕೆಲಸಗಳು ಬೇಗನೆ ಮುಗಿಯಲಿ ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ.
ಹಿಂದೆಲ್ಲಾ ಆಯೋಗದ ಕೆಲಸಗಳು ತುಂಬಾ ವಿಳಂಭವಾಗುತ್ತಿದ್ದವು. ಆದರೆ ಸರ್ಕಾರಿ ನೌಕರರ ಸಂಘದ ಮುತುವರ್ಜಿಯಿಂದ ಈ ಕೆಲಸಗಳು ಬೇಗನೇ ಆಗ್ತಿವೆ. ಮಾರ್ಚ್ ಒಳಗೇ ಎಲ್ಲಾ ಪರಿಶೀಲನೆ ಮುಗಿಯಬೇಕು. ಫೆಬ್ರವರಿ ಯಲ್ಲಿ ಸರ್ಕಾರ ಬಜೆಟ್ ಮಂಡನೆ ಮಾಡುತ್ತದೆ. ಬಜೆಟ್ ಮಂಡನೆ ವೇಳೆ ಇದಕ್ಕೆ ಎಷ್ಟು ಖರ್ಚಾಗುತ್ತೆ ಎಂಬುದನ್ನ ನೋಡಿಕೊಂಡು ಹಣ ನೀಡಬೇಕು. ಈ ಸಲ 40% ಫಿಟ್ ಮೆಂಟ್ ನೀಡಿದರೆ ಸುಮಾರು 12 ಸಾವಿರ ಕೋಟಿ ಹೆಚ್ಚುವರಿ ಹೊರೆಯಾಗಬಹುದು ಎಂದು ನಾವು ಅಂದಾಜಿಸಿದ್ದೇವೆ. ಬಿಎಸ್ ಯಡಿಯೂರಪ್ಪ 22% ಫಿಟ್ ಮೆಂಟ್ ಬೆನಿಫಿಟ್ ನೀಡಿದ್ರೆ, ಸಿದ್ದರಾಮಯ್ಯ ಸರ್ಕಾರ 30% ಕೊಟ್ಟಿತ್ತು ಈಗ ಬಸವರಾಜ್ ಬೊಮ್ಮಾಯಿ ಶೇ.40 ಫಿಟ್ ಮೆಂಟ್ ಲಾಭ ನೀಡಿದರೆ ಅನುಕೂಲವಾಗುತ್ತೆ. ಐದು ಲಕ್ಷ ಸರ್ಕಾರಿ ನೌಕರರು, ಮೂರು ಲಕ್ಷ ನಿಗಮ ಮಂಡಳಿಯಲ್ಲಿ ಕೆಲಸ ಮಾಡುವ ನೌಕರರು ಹಾಗೂ ನಾಲ್ಕು ಲಕ್ಷದಷ್ಟು ನಿವೃತ್ತ ನೌಕರರೂ ಸೇರಿ ಸುಮಾರು 11 ಲಕ್ಷ ಕುಟುಂಬಗಳಿಗೆ ಅನುಕೂಲವಾಗುತ್ತೆ ಎಂದರು
#shivamogga #employeesunion #salary
Our Website: Vijaykarnataka.com
Facebook: / vijaykarnataka
Twitter: / vijaykarnataka
ಷಡಕ್ಷರಿ ಸರ್ ಧನ್ಯವಾದಗಳು ನಿಮಗೆ..
Thank you sir. Really great.
ದಯವಿಟ್ಟು ಈ ವರ್ಷ ನಿವೃತ್ತಿ ಹೊಂದಿದವರಿಗೂ ಈ ಸೌಲಭ್ಯ ಒದಗಿಸಲು ಪ್ರಯತ್ನಿಸಿ. ನಮಸ್ಕಾರಗಳು.
Shadakshari sir,saakashtu effort maadiddira valleyadu
1-4-2023 rinda financial benefit ellarigoo siguva haage maadi.
ಸರ್,ಈ ವರುಷ ನಿವೃತಿ ಹೊಂದುವವರಿಗೂ7ನೇ ವೇತನ ಆಯೋಗದ ಉಪಯೋಗ ಮಾಡಿಕೊಡಿ
Cm 40/ge oppikondidara bega heli sir
ಅಧ್ಯಕ್ಷರೇ ಬರಿ ಮಾತು beda 7ನೇ ವೇತನ ಇನ್ನು ಎಷ್ಟು ತಿಂಗಳು ಆಗುತ್ತೆ heli
sir. KSRTC ನೌಕರರ ವೇತನ ತಾರತಮ್ಯ ವನ್ನ ಸರ್ಕಾರದೊಂದಿಗೆ ಮಾತನಾಡಿ ಸರಿಪಡಿಸಿ..
Shadaxri sir nivu weak mind use maadtiddira.first struck maadi ktk employ work band maadisi
Ethakke hale news
District central co-operative bank semi government job alva edakke 7th pay commission apply agutta?
Nau december nali relaxer aguteve name Yi labha shig beku
we want central pay scale n abolish NPS.
What is fitment??
ಏಳನೇವೇತನಯಾವಗಜಾರೀಯಗತ್ತೆತಿಳಿಸಿ.
Sar hutti Gold Mines bagge hali
Shadashari Sahebre Dayavittu Nimma Bhashanadalli Ee 4 varsha 7 tingalu Annodanna Helodanna Bidri keli keli sakaitu. Innondu helodadre 7 th pay commission saha hattahatra andranu 6 varshane tugobahudu..Modalu implement Madi hosa salary bandmelene Nambodu esht time tugotaiti ant..
Karnatakadaya udadarukagavannaparakeyaragaykodutaray100persentsure
8 Adaru Ventana ayoga Ella's Edu Ethiyasa
we want OPS
Best speaket
ಸಾಕಾಗಿದೆ ಬಿಡಪ್ಪ ಕೇಳಿ ಕೇಳಿ ಆಗೋದಿಲ್ಲ ಹೋಗೋದಿಲ್ಲ
Best speaker
Bole basava shadakshari
ಹಾಡಿದ್ದಾನೆ ಹಾಡುವ ಕಿಸ್ ಬಾಯಿ ದಾಸ ಎನ್ನುವ ಕಥೆ ಆಯಿತು.
Anthu govinda anni
7 varsha ayitu ellide vetana ayoga
Innu ondhu varsha kadhu nodona
Valle kathe gara
Bari burude Adyaksha
ಎಷ್ಟರ ಖರ್ಚು ಆಗ್ಲಿ ಬಿಡ್ರಿ ಪುಕ್ಜಟೆ 5 ಗ್ಯಾರಂಟಿಗೆ ದುಡ್ಡು ಸುರೀತಾ ಇಲ್ವಾ?
Modalinavare best taavu ----
7ನೇ ವೇತನ ಬಹಳ ಖುಷಿ ತಂದಿದೆ ಕಾರ್ಯರೂಪಕ್ಕೆ ಬಂದಾಗ ಮಾತ್ರ 😜🤣
ಹೌದು ಸರ್.
ಥ್ಯಾಂಕ್ ಯು ಫಾರ್ ವಾಚಿಂಗ್
ಬಯಕೆ ಬಿಸಿಲುಗುದರೆಯಾಗಬಾರದು.
ಅನಿಸಿಕೆಗಳನ್ನು ಹೇಳುವುದರ
ಅನಿಸಿಕೆಗಳನ್ನ ಹೇಳುವುದರ ಬಗ್ಗೆ ತಪ್ಪೇನಿಲ್ವಲ್ಲ ನಾವು ಕೇಳಿದ ತಕ್ಷಣ ಎಲ್ಲವನ್ನು ಮಾಡುತ್ತಾರೆಯೇ 🙏😜
hale news waste Adyaksha use less
Sidramaiah 30% fitment kotru adre hra 20% kammi madidru Very intelligent siddu