ಉತ್ತರಾಧಿಮಠ
Вставка
- Опубліковано 21 чер 2024
- ಶ್ರೀ ಸತ್ಯಾತ್ಮತೀರ್ಥರು, ಪೂರ್ವಾಶ್ರಮದಲ್ಲಿ ಗುತ್ತಲ ಮನೆತನದ ಶ್ರೀ ಸರ್ವಾಜ್ಞಾಚಾರ್ಯರು. ಪಂಡಿತ ಗುತ್ತಲ ರಂಗಾಚಾರ್ಯ ಮತ್ತು ಸೌ ರುಕ್ಮಿಣೀಬಾಯಿ ಅವರ ಜ್ಯೇಷ್ಠ ಪುತ್ರರಾಗಿ ೧೯೭೩ರಲ್ಲಿ ಅವತರಿಸಿದರು. ಬಹುಮುಖ ಪ್ರತಿಭೆ ವಿಲಕ್ಷಣ ತೇಜಸ್ಸು, ಪ್ರಗಾಢ ಪಾಂಡಿತ್ಯ, ನಿರಂತರ ನಗುಮುಖ, ಪ್ರಶಾಂತ ಮೂರ್ತಿ, ಈ ಎಲ್ಲ ಗುಣಗಳು ಒಬ್ಬರಲ್ಲಿ ಮಿಳಿತವಾಗಿರುವುದೇ ಒಂದು ಅಶ್ಚರ್ಯ. ಹಂಸನಾಮಕ ಪರಮಾತ್ಮನ ಅನೂಚಾನ ಪರಂಪರೆಯಲ್ಲಿ ಈ ಹಿಂದೆ ಶ್ರೀ ರಘೂತ್ತಮ ತೀರ್ಥರು ಬಾಲ ಬ್ರಹ್ಮಚಾರಿಗಳಾಗಿ ಸರ್ವಜ್ಞ ಪೀಠವನ್ನು ಅಲಂಕರಿಸಿದ್ದರು. ಅತೆಯೇ ಶ್ರೀ ಸತ್ಯಾತ್ಮ ತೀರ್ಥರಿಗೆ ಅಭಿನವ ರಘೂತ್ತಮತೀರ್ಥರೆಂದೇ ಹೆಸರು.
ಸಮಾಜದ ಕೊನೆಯ ವ್ಯಕ್ತಿಗೂ ಪ್ರಥಮ ದರ್ಶನದಲ್ಲಿಯೇ ಆಕರ್ಷಣೆ ಹುಟ್ಟಿಸುವಂಥ ಅವರ ನಕ್ಕು ನಗಿಸುವ ಮುಗ್ಧ ಭಾವ ಯಾರನ್ನೂ ಸೆರೆ ಹಿಡಿಯದೆ ಬಿಡುವುದಿಲ್ಲ. ಇನ್ನಷ್ಟುಮತ್ತಷ್ಟು, ಕೊನೆ ಇರದಷ್ಟು ಅವರ ಸಾನ್ನಿಧ್ಯವನ್ನು ಬಯಸುತ್ತವೆ. ಅವರ ಮಾತುಗಳು, ಪ್ರವಚನಗಳು ಮಾಧ್ವ ವಿಶ್ವದಲ್ಲಿ ಒಂದು ಭವ್ಯ ಆಶಾಕಿರಣವನ್ನು ಹುಟ್ಟಿಸಿವೆ. ಅಂತೆಯೇ ಹಿರಿಯ ಯತಿಗಳು, ಬುದ್ಧಿಜೀವಿಗಳು ಅವರನ್ನು ಶಕಪುರುಷರು ಎಂದು ಕರೆದದ್ದರಲ್ಲಿ ಆಶ್ಚರ್ಯವಿಲ್ಲ. ಪ್ರವಚನಗಳಲ್ಲಿಯ, ಆಶೀರ್ವಚನಗಳಲ್ಲಿಯ ಅವರ ಪ್ರೌಢ ಜ್ಞಾನ,ಮಾತಿನ ಮಾಧುರ್ಯ, ವಿಚಾರಗಳ ನಾವಿನ್ಯತೆ, ನಿರೂಪಣೆಯ ನೈಪುಣ್ಯ, ನೂರಾರು ಗ್ರಂಥಗಳ ಉದಾಹರಣೆಯ ವೈದುಷ್ಯಗಳು ಅವರನ್ನು ಶ್ರೀ ಮಧ್ವಾಚಾರ್ಯರನ್ನೇ ನೆನೆಪಿಸುತ್ತವೆ. …. - Розваги
🙏🙏🙏
Sree Satyatmateertha Gurubhyonnamaha. 🙏🙏🙏🙏🙏
Sri sattyatmateertha gurubhyonamaha 🙏
ಶ್ರೀ ಗುರುಭ್ಯೋ ನಮ:
🙏🙏
తెలుగులో ఉన్న ప్రవచనములను షేర్ చేయగలరు.
ಗುರುಭ್ಯೋ ನಮಃ
Hari Srinivasa Swmigi Dhanyvadagalu 🙏 🙏🙏🙏🙏🙏