ನಮ್ಮ ಬೇರುಗಳು ಸಭೆ ೧೯೨: ಜ್ಞಾನ-ವಿಜ್ಞಾನ-ಯಾನ | ನಿರೂಪಣೆ: ಶ್ರೀಮತೀ ಪ್ರತಿಭಾ ಕಾವ್ಯಶ್ರೀ
Вставка
- Опубліковано 4 жов 2024
- ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ।
ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ|
ಜ್ಞಾನಕ್ಕೆ ಸಮನಾದುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ಭಗವದ್ಗೀತೆಯೇ ಹೇಳುತ್ತದೆ.
ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ |
ಜ್ಞಾನಂ ವಿಜ್ಞಾನಸಹಿತಂ ಯಜ್ಞಾತ್ವಾ ಮೋಕ್ಷ್ಯಸೇಯಶುಭಾತ್ ।।
ಅಂತೆಯೇ ಭಗವದ್ಗೀತೆಯ ಇನ್ನೊಂದು ಶ್ಲೋಕದಲ್ಲಿ ವಿಜ್ಞಾನ ಎಂದರೆ ವಿಶೇಷ ರೂಪೇಣ ಜ್ಞಾನಂ ಅಥವಾ ಸ್ವಯಂ ಅನುಭವ ಜ್ಞಾನ ಎಂದು ಹೇಳಲ್ಪಡುತ್ತದೆ ·
ಭಾರತೀಯ ಜ್ಞಾನ ಪರಂಪರೆಯ ಆಳವಾದ ಅಧ್ಯಯನ, ಭೌತಿಕ ಲೋಕದಲ್ಲಿನ ವಿಜ್ಞಾನದ ಆವಿಷ್ಕಾರಗಳು, ಇವೆಲ್ಲವನ್ನೂ ಸೂಕ್ಶ್ಮಾತಿ ಸೂಕ್ಷ್ಮವಾಗಿ ಗಮನಿಸಿ, ತಮ್ಮ ಕಲ್ಪನೆಯ ಮೂಸೆಯೊಳಗೆ ಹದಗೊಳಿಸಿ ಸತ್ವಯುತ ಬರಹದಿಂದ ಕನ್ನಡಿಗರಿಗೆ ಉಣಬಡಿಸುತ್ತಿರುವ ಶ್ರೀಯುತ ಎಸ್. ಎಲ್. ಭೈರಪ್ಪನವರ ಒಂದು ಕೃತಿ "ಯಾನ".
ಈ ಕುರಿತು ನಮ್ಮ ಪಯಣ 'ಜ್ಞಾನ ವಿಜ್ಞಾನ ಯಾನ' ನಮ್ಮ ಬೇರುಗಳ ವತಿಯಿಂದ. ನೀವು ಬನ್ನಿ ಭಾಗವಹಿಸಿ. ಒಂದು ಸುಂದರ ಅನುಭವ ನಿಮ್ಮದಾಗಿಸಿಕೊಳ್ಳಿ.
ದಿನಾಂಕ: 28 ಸೆಪ್ಟೆಂಬರ್ 2024, ಶನಿವಾರ
ಸಮಯ: ಅಪರಾಹ್ನ 2.45-4.00
#kannadaclub #kannada #slbhyrappa #yaana #bookreview #nasa #science #sciencefiction #astronomy #nammaberugalu