Draupadi Maana Rakshana- Udaya Raga Kruthi

Поділитися
Вставка
  • Опубліковано 13 вер 2024
  • ದ್ರೌಪದೀ ಮಾನ ರಕ್ಷಣಾ- ಉದಯ ರಾಗ ಕೃತಿ
    ಶ್ರೀ ಪುರಂದರ ದಾಸ ವಿರಚಿತ 🙏
    ವಾಸುದೇವಾಯ ನಮೋ ವಾಸುದೇವಾಯ ನಮೋ
    ವಾಸುಕೀ ಶಯನ ಸುರನಮಿತ ಚರಣಾಂಭೋಜ
    ಭಕ್ತ ಪೋಷಕನೆ ರಕ್ಷಿಪುದು ಕೇಶವ ಅನಾಥ ಬಂಧು||೧||
    ಸೊಂಡಿಲಾ ಪುರದೊಳಗೆ ದುರುಳ ದುರ್ಯೋಧನನು
    ಪಾಂಡು ನಂದನರೊಡನೆ ಕಪಟ ಜೂಜುಗಳಾಡಿ
    ಗಂಡರೈವರ ಮುಂದೆ ನೃಪರ ಸತಿಯಳ ಸೆರಗ
    ಲಂಡ ದುಶ್ವಾಸ ಪಿಡಿಯೇ||೨||
    ಕಂಡು ಮನದಲಿ ಬೆದರಿ ಪರಮಾತ್ಮ ಪರಿಪೂರ್ಣ
    ಪುಂಡರೀಕಾಕ್ಷ ರಕ್ಷಿಪುದೆನುತಾ
    ಮೊರೆಯಿಟ್ಟಳಂಡಜಾ ತುರುಗಗಾಗ ||೩||
    ಪತಿಗಳೈವರು ಸತ್ಯ ವ್ರತದಿ ಸುಮ್ಮನೆ ಇಹರು
    ಅತಿ ಕ್ಲೇಷ ಪಡುತಿಹರು ವಿದುರ ಭೀಷ್ಮಾದಿಗಳು
    ಸುತನ ಮೇಲಿನ ಮೋಹ ಮಮತೆಯಲಿ ಸುಮ್ಮನಿಹ
    ಗತ ಲೋಚನದ ಮಾವನು||೪||
    ಕೃತಕಪಟದಲ್ಲಿಹರು ಶಕುನಿ ಕರ್ಣಾದಿಗಳು
    ಹಿತವ ಬಯಸುವರ ಕಾಣೆ ನಾನಿದರೊಳಗೆ
    ಗತಿಯಿಲ್ಲದಿದ್ದೋರ್ಗೆ ಗತಿ ನೀನೆ ಯದುಕುಲಕೆ
    ರತಿಪತಿ ಪಿತನೆ ಸಲಹೋ||೫||
    ಪಾವುಕನ ಉರಿಯೊಳಗೆ ಹೊಕ್ಕು ಹೊರಡಲಿಬಹುದು
    ಹಾವುಗಳ ಹೆಡೆ ಹಿಡಿದು ಎಳೆದೆಳೆದು ತರಬಹುದು
    ತೀವಿರ್ದ ಮಡುವಿನೊಳು ಧುಮುಕಲುಬಹುದು
    ಗರಳವ ಸೇವಿಸಲಿಬಹುದು||೬||
    ಸಾವಿಗಂಜದೆ ಕೊರಳ ಕತ್ತರಿಸಲೀಬಹುದು
    ಜೀವ ಇದ್ದಂತೆ ಲಜ್ಜೆಯ ತೊರೆಯಲಾರೆನೈ
    ಆವ ಪರಿಯಲಿ ನಿನ್ನ ನಂಬಿದ್ದನಾಥಳನು
    ದೇವಾಭಿಮಾನವನು ಕಾಯೋ||೭||
    ಅತ್ತೆಯಲ್ಲವೆ ಎನಗೆ ಗಾಂಧಾರಿ ದೇವಿಯರು
    ಮೃತ್ಯುವಂತಿವನೆಳೆವ ಬಿಡಿಸ ಬಾರದೆ ತಾಯೇ
    ಉತ್ತುಮಳು ನೀ ನೆಗೆಣ್ಣೆ ಭಾನುಮತೀ
    ಇತ್ತ ದಯಮಾಡಿ ನೋಡೇ||೮||
    ಸುತ್ತ ನೆರೆದಿಹ ಸಭೆಯ ಪರಿವಾರದವರೆಲ್ಲ
    ಪೆತ್ತುದಿಲ್ಲವೆ ಎನ್ನ ಪೋಲ್ವ ಹೆಣ್ಮಕ್ಕಳನು
    ಹುತ್ತದಲಿ ಹುದುಗಿದ್ದ ಸರ್ಪ ಸಾಯಲು ಬಹುದೇ
    ತತ್ವ ಬಾಹಿರರಾದಿರಾ||೯||
    ಆರಿಗ್ವೊರಲಿದರೆನ್ನ ದೂರು ಕೇಳುವರಿಲ್ಲ
    ಸಾರಿದರೆ ಪೊರೆವ ಕಂಸಾರಿ ನೀನಲ್ಲ
    ನನಗಾರು ಆಪ್ತ ಬಂಧು||೧೦||
    ಮಾರಿದರು ಧರ್ಮ ದೇವತರಗೆನ್ನ ವಲ್ಲಭರು
    ಭಾರ ನಿನ್ನದು ಎಂದು ನಂಬಿದ್ದನಾಥಳನು
    ನೀರಿನೊಳಗದ್ದು ಕ್ಷೀರದೊಳಗದ್ದು ನೀನೇ ಗತಿ
    ನಾರಾಯಣನೆ ರಕ್ಚಿಸೋ||೧೧||
    ಅಸುರ ಬೆನ್ನಟ್ಟಿ ಬರೆ ಪಶುಪತಿಯ ರಕ್ಷಿಸಿದೆ
    ಋಷಿ ಶಾಪವನು ಧರಿಸಿದ್ದಂಬರೀಷನ ಕಾಯ್ದೆ
    ವಸುಧೆಯಲಿ ಕಲ್ಲಾಗಿ ಬಿದ್ದಹಲ್ಯೆಯ ಪೊರೆದೆ
    ಶಿಷುವು ಪ್ರಹ್ಲಾದಗೊಲಿದೆ||೧೨||
    ಹಸುಳೆ ಧ್ರುವರಾಯಂಗೆ ಹೆಸರುಳ್ಳ ಪದವಿತ್ತೆ
    ದಶಕಂಠನನುಜಂಗೆ ಸ್ಥಿರ ಪಟ್ಟವನು ಕೊಟ್ಟೆ
    ಹೆಸರುಗೊಂಡರೆ ಸುತನ ಅಜಮಿಳನ ಕಾಯ್ದೇ
    ವಸುದೇವ ಸುತನೆ ಸಲಹೋ||೧೩||
    ಲಕ್ಷ್ಮೀ ಮನೋಹರನೆ ಇಕ್ಷು ಛಾಪನ ಪಿತನೆ
    ಯಕ್ಷ ಗಂಧರ್ವ ಮುನಿ ಅಮರೇಂದ್ರ ವಂದಿತನೆ
    ಅಕ್ಷಯನೆ ಆಟದಲಿ ಜಗವ ಮೋಹಿಪನೆ
    ಸೂಕ್ಷ್ಮದೊಳು ಪರಿಪೂರ್ಣನೆ||೧೪||
    ಅಕ್ಷಯ ಅಸುರಾಂತಕಗೆ ಅಜ ಪದವಿಯನಿತ್ಯೋ
    ದಕ್ಷ ಸುತೆ ಪತಿ ಸಖನೆ ಪಕ್ಷಿವಾಹನ ದೇವ
    ರಕ್ಷಿಸೋ ಅನಾಥ ಬಂಧು||೧೫||
    ತಂದೆ ತಾಯಿಯು ನೀನೆ ಬಂಧು ಬಳಗವು ನೀನೇ
    ಇಂದೆನ್ನ ಕುಲಸ್ವಾಮಿ ಗುರು ಪಿತಾಮಹ ನೀನೇ
    ಎಂದು ನಂಬಿದೆ ಎನ್ನ ಮಾನ ಅಭಿಮಾನ
    ಮುಕುಂದ ನಿನಗೊಪ್ಪಿಸಿದೆನೈ||೧೬||
    ಕೊಂದರೊಳ್ಳಿತು ಎನ್ನ ಕಾಯ್ದರೊಳ್ಳಿತು ಎಂದು
    ಕಣ್ಗಳನೆ ಮುಚ್ಚಿ ಕರಗಳ ನೆಗಹೀ
    ಗೋವಿಂದಾ! ಎಂದಳು ಮೃಗಾಕ್ಷೀ||೧೭||
    ಇಂತೆನುತ ದ್ರೌಪದಿಯು ಮೊರೆಯಿಡುವುದನು ಕೇಳಿ
    ಅಂತರಾತ್ಮಕ ಕೃಷ್ಣ ದ್ವಾರಕಾ ಪುರದೊಳಗೆ
    ಕಾಂತೆ ರುಕ್ಮಿಣೀ ಸತ್ಯಭಾಮೆಯರ ಒಡನೆ
    ಏಕಾಂತ ಭವನದಲಿ ಕುಳಿತು||೧೮||
    ಕುಂತಿ ನಂದನರ ಸತಿ ಉಟ್ಟುದಕ್ಷಯವಾಗಿ
    ಸಂತೋಷಗೊಳಲೆಂದು ವರವಿತ್ತ ಶ್ರೀ ಕೃಷ್ಣ
    ಎಂತುಂಟು ಹರಿಕೃಪೆಯು ತನ್ನ ಭಕ್ತರ ಮೇಲೆ
    ಅನಂತ ವಸ್ತ್ರಗಳಾದವೈ||೧೯||
    ಸೆಳೆಯುತಿದ್ದನು ಖಳನು ಬೆಳೆಯುತಿದ್ದವು ಸೀರೆ
    ಚೆಲುವ ಪೊಂಬಟ್ಟೆ ನಾನಾ ವಿಚಿತ್ರದಾ ಬಣ್ಣ
    ಹೊನಲು ತುಂಬಿದ ಸೀರೆ ಎಳೆದೆಳೆದು ಪಾಪಾತ್ಮ
    ಬಳಲಿ ಬಿದ್ದನು ಭುವಿಯೊಳು||೨೦||
    ಕಳೆಯುಗುಂದಿತು ಮೋರೆ ಶಕುನಿ ದುರ್ಯೋಧನರು
    ಬಳಿಯೆ ನಿಂತಿದ್ದ ಭಟರನೆ ಕರೆದು ನೇಮಿಸುತ
    ತಿಳುಹುದಲೆ ಬೊಕ್ಕಸಕೆ ಕಳುಹು ವಸ್ತ್ರಗಳ ಎನಲು
    ನಳಿನಮುಖಿ ತಿಳಿದಳದನು||೨೧||
    ಸಿಟ್ಟಿನಲಿ ಪತಿವ್ರತೆಯು ಕಣ್ತೆರೆದು ನೋಡಿದಳು
    ಬೆಟ್ಟದಂತೊಟ್ಟಿದ್ದ ವಸ್ತ್ರ ರಾಶಿಗಳೆಲ್ಲ
    ಸುಟ್ಟಗ್ನಿ ಹೊರಸೂಸಿ ರಾಜಮನೆ ಕೆಲವು
    ಪಟ್ಟಣಾಹುತಿಗೊಂಡವೈ||೨೨||
    ಕೊಟ್ಟಳೇ ಕಮಲಮುಖಿ ಕುರುಪತಿಗೆ ಶಾಪವನು
    ಕೊಟ್ಟಳಾ ರಣದಿ ಭೀಮಸೇನನ ಗದೆ ಬಂದು
    ಕುಟ್ಟಿ ಕೆಡಹಲಿ ನಿನ್ನ ತೊಡೆಗಳೆರಡನು ಎಂದು
    ಇಟ್ಟ ನುಡಿ ತಪ್ಪಲುಂಟೇ||೨೩||
    ಮೂಡಿದವು ಪ್ರತಿ ಸೂರ್ಯ ಧೂಮಕೇತುಗಳು
    ಓಡಾಡಿದವು ಗಗನದಲಿ ಹದ್ದು ಕಾಗಿಗಳು
    ಕಾದಾಡಿದವು ಮೃಗಜಾತಿ ಚಲಿಸಿದವು ಪ್ರತಿಮೆ
    ರೂಢಿ ಗಡಗಡ ನಡುಗಿತು||೨೪||
    ಮೂಡಿದವು ನಕ್ಷತ್ರ ರಾಶಿಗಳು ದಿವದಿ
    ಮಾತಾಡಿದವು ಅಶರೀರ ವಾಕ್ಯಗಳು ಪುರಜನರು
    ಕೇಡು ಕೌರವ ರಾಯಗೆಂದು ನಿಶ್ಚಯಿಸಿ
    ಓಡಿ ಮನೆಗಳ ಹೊಕ್ಕರು||೨೫||
    ಹರುಷ ಪಟ್ಟರು ಮನದಿ ವಿದುರ ಭೀಷ್ಮಾದಿಗಳು
    ಸುರರು ನಾರದರಂದು ದ್ರೌಪದಿಯ ಸಿರಿ ಮುಡಿಗೆ
    ಸುರಿಸಿದರು ಪೂ ಮಳೆಗಳಾ||೨೬||
    ಹರಿಯ ನಾಮಾವಳಿಯ ಪೊಗಳುತಲೆ ದಿವಿಜೇಂದ್ರ
    ತಿರುಗಿ ಪೋದನು ತನ್ನ ಪಟ್ಟಣಕೆ ಧರೆ ಮೇಲೆ
    ಹರಿನಾಮ ಪೊಗಳುವರೆ ಧನ್ಯರೋ ಲೋಕದಲಿ
    ದ್ರೌಪದಿಯ ಹರಿನಾಮವೇ ಕಾಯಿತು||೨೭||
    ಯಾರು ಉದಯ ಕಾಲದೊಳೆದ್ದು ಭಾವ ಭಕ್ತಿಯಲಿ
    ಭಾವ ಶುದ್ಧ್ಯಿಂದ ಭಜನೆ ಮಾಳ್ಪಂಥವರ
    ಸಾವಿರಾರ್ ಜನ್ಮದ ಸಂಚಿಸಿದ ಪಾಪಗಳು
    ತಾವೆ ಹತವಾಗೋವೆಂದು||೨೮||
    ಶ್ರೀ ವಾಸುದೇವ ಆಜ್ಞಾಪಿಸಿದ ರುಕ್ಮಿಣಿಗೆ
    ದೇವಿ ಕೇಳೆನ್ನ ಭಾಷೆಯ ಮುಂದೆ ಅರ್ಜುನಗೆ
    ನಾನೇ ಸಾರಥಿಯಾಗಿ ಸಲಹುವೆನು ಅವರೆನ್ನ
    ಜೀವ ಪಾಂಡವರೆಂದನು||೨೯||
    ಮಂಗಳಮ್ ಮತ್ಸ್ಯ ಕೂರ್ಮ ವರಾಹ ನರಸಿಂಹನಿಗೆ
    ಮಂಗಳಮ್ ವಟು ಭಾರ್ಗವ ರಾಮ ಕೃಷ್ಣರಿಗೆ
    ಮಂಗಳಮ್ ಪುರಂದರ ವಿಠಲ ರಾಯನಿಗೆ
    ಜಯ ಮಂಗಳಮ್ ನಿತ್ಯ ಶುಭ ಮಂಗಳಮ್ ||೩೦||
    ||ಜಯ ಮಂಗಳಮ್ ನಿತ್ಯ ಶುಭ ಮಂಗಳಮ್ ||

КОМЕНТАРІ • 26

  • @saraswathivattam1158
    @saraswathivattam1158 2 місяці тому

    What a soulful rendition 🙏🙏🙏

  • @shanthajayaraman8626
    @shanthajayaraman8626 Рік тому

    Super

  • @padmajadevi4722
    @padmajadevi4722 Рік тому

    Sooooper.chrlo hadideeri.

  • @krishnacharsangam168
    @krishnacharsangam168 Рік тому

    Ad bhut! presentation,bharati mata sharada shachidevi commendable. Nimna hadugarike sarisatiye illa very pleasing. Bharateeya sanskritiya samsarane

  • @jagannathdas9480
    @jagannathdas9480 Рік тому

    So nice

    • @yumaboccsa
      @yumaboccsa  Рік тому

      ಧನ್ಯಾಸ್ಮಿ 🙏 ತಮ್ಮಂಥ ಮಹಿಮರು ಈ ಪ್ರಸ್ತುತಿಯನ್ನು ಮನ್ನಿಸಿದ್ದಕ್ಕೆ ಕೃತಾರ್ಥಳಾದೆ 🙏🙏

  • @lakumeesha4547
    @lakumeesha4547 2 роки тому +1

    Engrossing, unassuming class! ಶಾಂತ, ಸುಶ್ರಾವ್ಯ, ನಮ್ರ, ಭಕ್ತಿಪೂರ್ಣ ಗಾಯನ.

  • @shyamns6496
    @shyamns6496 2 роки тому +2

    🙏👌ಬಹಳ ಅದ್ಭುತವಾಗಿದೆ

  • @heman8993
    @heman8993 2 роки тому

    Very devine voice. Manassige tumba santosha vayitu amma👍🙏🙏😊

  • @yumaboccsa
    @yumaboccsa  2 роки тому +2

    ವಾಸುದೇವಾಯ ನಮೋ ವಾಸುದೇವಾಯ ನಮೋ
    ವಾಸುಕೀ ಶಯನ ಸುರನಮಿತ ಚರಣಾಂಭೋಜ
    ಭಕ್ತ ಪೋಷಕನೆ ರಕ್ಷಿಪುದು ಕೇಶವ ಅನಾಥ ಬಂಧು||೧||
    ಸೊಂಡಿಲಾ ಪುರದೊಳಗೆ ದುರುಳ ದುರ್ಯೋಧನನು
    ಪಾಂಡು ನಂದನರೊಡನೆ ಕಪಟ ಜೂಜುಗಳಾಡಿ
    ಗಂಡರೈವರ ಮುಂದೆ ನೃಪರ ಸತಿಯಳ ಸೆರಗ
    ಲಂಡ ದುಶ್ವಾಸ ಪಿಡಿಯೇ||೨||
    ಕಂಡು ಮನದಲಿ ಬೆದರಿ ಪರಮಾತ್ಮ ಪರಿಪೂರ್ಣ
    ಪುಂಡರೀಕಾಕ್ಷ ರಕ್ಷಿಪುದೆನುತಾ
    ಮೊರೆಯಿಟ್ಟಳಂಡಜಾ ತುರುಗಗಾಗ ||೩||
    ಪತಿಗಳೈವರು ಸತ್ಯ ವ್ರತದಿ ಸುಮ್ಮನೆ ಇಹರು
    ಅತಿ ಕ್ಲೇಷ ಪಡುತಿಹರು ವಿದುರ ಭೀಷ್ಮಾದಿಗಳು
    ಸುತನ ಮೇಲಿನ ಮೋಹ ಮಮತೆಯಲಿ ಸುಮ್ಮನಿಹ
    ಗತ ಲೋಚನದ ಮಾವನು||೪||
    ಕೃತಕಪಟದಲ್ಲಿಹರು ಶಕುನಿ ಕರ್ಣಾದಿಗಳು
    ಹಿತವ ಬಯಸುವರ ಕಾಣೆ ನಾನಿದರೊಳಗೆ
    ಗತಿಯಿಲ್ಲದಿದ್ದೋರ್ಗೆ ಗತಿ ನೀನೆ ಯದುಕುಲಕೆ
    ರತಿಪತಿ ಪಿತನೆ ಸಲಹೋ||೫||
    ಪಾವುಕನ ಉರಿಯೊಳಗೆ ಹೊಕ್ಕು ಹೊರಡಲಿಬಹುದು
    ಹಾವುಗಳ ಹೆಡೆ ಹಿಡಿದು ಎಳೆದೆಳೆದು ತರಬಹುದು
    ತೀವಿರ್ದ ಮಡುವಿನೊಳು ಧುಮುಕಲುಬಹುದು
    ಗರಳವ ಸೇವಿಸಲಿಬಹುದು||೬||
    ಸಾವಿಗಂಜದೆ ಕೊರಳ ಕತ್ತರಿಸಲೀಬಹುದು
    ಜೀವ ಇದ್ದಂತೆ ಲಜ್ಜೆಯ ತೊರೆಯಲಾರೆನೈ
    ಆವ ಪರಿಯಲಿ ನಿನ್ನ ನಂಬಿದ್ದನಾಥಳನು
    ದೇವಾಭಿಮಾನವನು ಕಾಯೋ||೭||
    ಅತ್ತೆಯಲ್ಲವೆ ಎನಗೆ ಗಾಂಧಾರಿ ದೇವಿಯರು
    ಮೃತ್ಯುವಂತಿವನೆಳೆವ ಬಿಡಿಸ ಬಾರದೆ ತಾಯೇ
    ಉತ್ತುಮಳು ನೀ ನೆಗೆಣ್ಣೆ ಭಾನುಮತೀ
    ಇತ್ತ ದಯಮಾಡಿ ನೋಡೇ||೮||
    ಸುತ್ತ ನೆರೆದಿಹ ಸಭೆಯ ಪರಿವಾರದವರೆಲ್ಲ
    ಪೆತ್ತುದಿಲ್ಲವೆ ಎನ್ನ ಪೋಲ್ವ ಹೆಣ್ಮಕ್ಕಳನು
    ಹುತ್ತದಲಿ ಹುದುಗಿದ್ದ ಸರ್ಪ ಸಾಯಲು ಬಹುದೇ
    ತತ್ವ ಬಾಹಿರರಾದಿರಾ||೯||
    ಆರಿಗ್ವೊರಲಿದರೆನ್ನ ದೂರು ಕೇಳುವರಿಲ್ಲ
    ಸಾರಿದರೆ ಪೊರೆವ ಕಂಸಾರಿ ನೀನಲ್ಲ
    ನನಗಾರು ಆಪ್ತ ಬಂಧು||೧೦||
    ಮಾರಿದರು ಧರ್ಮ ದೇವತರಗೆನ್ನ ವಲ್ಲಭರು
    ಭಾರ ನಿನ್ನದು ಎಂದು ನಂಬಿದ್ದನಾಥಳನು
    ನೀರಿನೊಳಗದ್ದು ಕ್ಷೀರದೊಳಗದ್ದು ನೀನೇ ಗತಿ
    ನಾರಾಯಣನೆ ರಕ್ಚಿಸೋ||೧೧||
    ಅಸುರ ಬೆನ್ನಟ್ಟಿ ಬರೆ ಪಶುಪತಿಯ ರಕ್ಷಿಸಿದೆ
    ಋಷಿ ಶಾಪವನು ಧರಿಸಿದ್ದಂಬರೀಷನ ಕಾಯ್ದೆ
    ವಸುಧೆಯಲಿ ಕಲ್ಲಾಗಿ ಬಿದ್ದಹಲ್ಯೆಯ ಪೊರೆದೆ
    ಶಿಷುವು ಪ್ರಹ್ಲಾದಗೊಲಿದೆ||೧೨||
    ಹಸುಳೆ ಧ್ರುವರಾಯಂಗೆ ಹೆಸರುಳ್ಳ ಪದವಿತ್ತೆ
    ದಶಕಂಠನನುಜಂಗೆ ಸ್ಥಿರ ಪಟ್ಟವನು ಕೊಟ್ಟೆ
    ಹೆಸರುಗೊಂಡರೆ ಸುತನ ಅಜಮಿಳನ ಕಾಯ್ದೇ
    ವಸುದೇವ ಸುತನೆ ಸಲಹೋ||೧೩||
    ಲಕ್ಷ್ಮೀ ಮನೋಹರನೆ ಇಕ್ಷು ಛಾಪನ ಪಿತನೆ
    ಯಕ್ಷ ಗಂಧರ್ವ ಮುನಿ ಅಮರೇಂದ್ರ ವಂದಿತನೆ
    ಅಕ್ಷಯನೆ ಆಟದಲಿ ಜಗವ ಮೋಹಿಪನೆ
    ಸೂಕ್ಷ್ಮದೊಳು ಪರಿಪೂರ್ಣನೆ||೧೪||
    ಅಕ್ಷಯ ಅಸುರಾಂತಕಗೆ ಅಜ ಪದವಿಯನಿತ್ಯೋ
    ದಕ್ಷ ಸುತೆ ಪತಿ ಸಖನೆ ಪಕ್ಷಿವಾಹನ ದೇವ
    ರಕ್ಷಿಸೋ ಅನಾಥ ಬಂಧು||೧೫||
    ತಂದೆ ತಾಯಿಯು ನೀನೆ ಬಂಧು ಬಳಗವು ನೀನೇ
    ಇಂದೆನ್ನ ಕುಲಸ್ವಾಮಿ ಗುರು ಪಿತಾಮಹ ನೀನೇ
    ಎಂದು ನಂಬಿದೆ ಎನ್ನ ಮಾನ ಅಭಿಮಾನ
    ಮುಕುಂದ ನಿನಗೊಪ್ಪಿಸಿದೆನೈ||೧೬||
    ಕೊಂದರೊಳ್ಳಿತು ಎನ್ನ ಕಾಯ್ದರೊಳ್ಳಿತು ಎಂದು
    ಕಣ್ಗಳನೆ ಮುಚ್ಚಿ ಕರಗಳ ನೆಗಹೀ
    ಗೋವಿಂದಾ! ಎಂದಳು ಮೃಗಾಕ್ಷೀ||೧೭||
    ಇಂತೆನುತ ದ್ರೌಪದಿಯು ಮೊರೆಯಿಡುವುದನು ಕೇಳಿ
    ಅಂತರಾತ್ಮಕ ಕೃಷ್ಣ ದ್ವಾರಕಾ ಪುರದೊಳಗೆ
    ಕಾಂತೆ ರುಕ್ಮಿಣೀ ಸತ್ಯಭಾಮೆಯರ ಒಡನೆ
    ಏಕಾಂತ ಭವನದಲಿ ಕುಳಿತು||೧೮||
    ಕುಂತಿ ನಂದನರ ಸತಿ ಉಟ್ಟುದಕ್ಷಯವಾಗಿ
    ಸಂತೋಷಗೊಳಲೆಂದು ವರವಿತ್ತ ಶ್ರೀ ಕೃಷ್ಣ
    ಎಂತುಂಟು ಹರಿಕೃಪೆಯು ತನ್ನ ಭಕ್ತರ ಮೇಲೆ
    ಅನಂತ ವಸ್ತ್ರಗಳಾದವೈ||೧೯||
    ಸೆಳೆಯುತಿದ್ದನು ಖಳನು ಬೆಳೆಯುತಿದ್ದವು ಸೀರೆ
    ಚೆಲುವ ಪೊಂಬಟ್ಟೆ ನಾನಾ ವಿಚಿತ್ರದಾ ಬಣ್ಣ
    ಹೊನಲು ತುಂಬಿದ ಸೀರೆ ಎಳೆದೆಳೆದು ಪಾಪಾತ್ಮ
    ಬಳಲಿ ಬಿದ್ದನು ಭುವಿಯೊಳು||೨೦||
    ಕಳೆಯುಗುಂದಿತು ಮೋರೆ ಶಕುನಿ ದುರ್ಯೋಧನರು
    ಬಳಿಯೆ ನಿಂತಿದ್ದ ಭಟರನೆ ಕರೆದು ನೇಮಿಸುತ
    ತಿಳುಹುದಲೆ ಬೊಕ್ಕಸಕೆ ಕಳುಹು ವಸ್ತ್ರಗಳ ಎನಲು
    ನಳಿನಮುಖಿ ತಿಳಿದಳದನು||೨೧||
    ಸಿಟ್ಟಿನಲಿ ಪತಿವ್ರತೆಯು ಕಣ್ತೆರೆದು ನೋಡಿದಳು
    ಬೆಟ್ಟದಂತೊಟ್ಟಿದ್ದ ವಸ್ತ್ರ ರಾಶಿಗಳೆಲ್ಲ
    ಸುಟ್ಟಗ್ನಿ ಹೊರಸೂಸಿ ರಾಜಮನೆ ಕೆಲವು
    ಪಟ್ಟಣಾಹುತಿಗೊಂಡವೈ||೨೨||
    ಕೊಟ್ಟಳೇ ಕಮಲಮುಖಿ ಕುರುಪತಿಗೆ ಶಾಪವನು
    ಕೊಟ್ಟಳಾ ರಣದಿ ಭೀಮಸೇನನ ಗದೆ ಬಂದು
    ಕುಟ್ಟಿ ಕೆಡಹಲಿ ನಿನ್ನ ತೊಡೆಗಳೆರಡನು ಎಂದು
    ಇಟ್ಟ ನುಡಿ ತಪ್ಪಲುಂಟೇ||೨೩||
    ಮೂಡಿದವು ಪ್ರತಿ ಸೂರ್ಯ ಧೂಮಕೇತುಗಳು
    ಓಡಾಡಿದವು ಗಗನದಲಿ ಹದ್ದು ಕಾಗಿಗಳು
    ಕಾದಾಡಿದವು ಮೃಗಜಾತಿ ಚಲಿಸಿದವು ಪ್ರತಿಮೆ
    ರೂಢಿ ಗಡಗಡ ನಡುಗಿತು||೨೪||
    ಮೂಡಿದವು ನಕ್ಷತ್ರ ರಾಶಿಗಳು ದಿವದಿ
    ಮಾತಾಡಿದವು ಅಶರೀರ ವಾಕ್ಯಗಳು ಪುರಜನರು
    ಕೇಡು ಕೌರವ ರಾಯಗೆಂದು ನಿಶ್ಚಯಿಸಿ
    ಓಡಿ ಮನೆಗಳ ಹೊಕ್ಕರು||೨೫||
    ಹರುಷ ಪಟ್ಟರು ಮನದಿ ವಿದುರ ಭೀಷ್ಮಾದಿಗಳು
    ಸುರರು ನಾರದರಂದು ದ್ರೌಪದಿಯ ಸಿರಿ ಮುಡಿಗೆ
    ಸುರಿಸಿದರು ಪೂ ಮಳೆಗಳಾ||೨೬||
    ಹರಿಯ ನಾಮಾವಳಿಯ ಪೊಗಳುತಲೆ ದಿವಿಜೇಂದ್ರ
    ತಿರುಗಿ ಪೋದನು ತನ್ನ ಪಟ್ಟಣಕೆ ಧರೆ ಮೇಲೆ
    ಹರಿನಾಮ ಪೊಗಳುವರೆ ಧನ್ಯರೋ ಲೋಕದಲಿ
    ದ್ರೌಪದಿಯ ಹರಿನಾಮವೇ ಕಾಯಿತು||೨೭||
    ಯಾರು ಉದಯ ಕಾಲದೊಳೆದ್ದು ಭಾವ ಭಕ್ತಿಯಲಿ
    ಭಾವ ಶುದ್ಧ್ಯಿಂದ ಭಜನೆ ಮಾಳ್ಪಂಥವರ
    ಸಾವಿರಾರ್ ಜನ್ಮದ ಸಂಚಿಸಿದ ಪಾಪಗಳು
    ತಾವೆ ಹತವಾಗೋವೆಂದು||೨೮||
    ಶ್ರೀ ವಾಸುದೇವ ಆಜ್ಞಾಪಿಸಿದ ರುಕ್ಮಿಣಿಗೆ
    ದೇವಿ ಕೇಳೆನ್ನ ಭಾಷೆಯ ಮುಂದೆ ಅರ್ಜುನಗೆ
    ನಾನೇ ಸಾರಥಿಯಾಗಿ ಸಲಹುವೆನು ಅವರೆನ್ನ
    ಜೀವ ಪಾಂಡವರೆಂದನು||೨೯||
    ಮಂಗಳಮ್ ಮತ್ಸ್ಯ ಕೂರ್ಮ ವರಾಹ ನರಸಿಂಹನಿಗೆ
    ಮಂಗಳಮ್ ವಟು ಭಾರ್ಗವ ರಾಮ ಕೃಷ್ಣರಿಗೆ
    ಮಂಗಳಮ್ ಪುರಂದರ ವಿಠಲ ರಾಯನಿಗೆ
    ಜಯ ಮಂಗಳಮ್ ನಿತ್ಯ ಶುಭ ಮಂಗಳಮ್ ||೩೦||
    ||ಜಯ ಮಂಗಳಮ್ ನಿತ್ಯ ಶುಭ ಮಂಗಳಮ್ ||

  • @suganthilakshminarayanan7673
    @suganthilakshminarayanan7673 2 роки тому

    Hare Krishna. Govindha, Pundareekaksha, Arvindalochana, Rakshamam Pahimam

  • @bharathimukundarao4874
    @bharathimukundarao4874 2 роки тому

    ಅದ್ಬುತವಾಗಿದೆ ಮೇಂಡಂ...ತುಂಬಾ ಹೃದಯದ ಧನ್ಯವಾದಗಳು

  • @YADAVEDITZ_07
    @YADAVEDITZ_07 2 роки тому +1

    Nimma gayana thumba chenagide

  • @vishnuv8342
    @vishnuv8342 2 роки тому

    Very nice songs

  • @netravatikulkarni4010
    @netravatikulkarni4010 2 роки тому +1

    ಮೇಡಂ, ನಿಮ್ಮ ಹಾಡನ್ನು ವರ್ಣಿಸಲು ಶಬ್ದಗಳಿಲ್ಲ, ಕೇಳಿದಾಗ ಕಣ್ಣಲ್ಲಿ ನೀರು ಬರುತ್ತದೆ. 🙏🙏🙏🙏🙏🙏👌👌🙏🙏

  • @HBMNofficial
    @HBMNofficial 2 роки тому

    Hare Krishna 🙏🙏

  • @krishnacharsangam168
    @krishnacharsangam168 Рік тому

    Patigalivaru satyavratadaliharu ati klesh padutiharu vidura bheeshmadigalu suhana melinmoha mamateyali summa niha gata lochanada navanu. Hitav bayasuvar kane❤ gatiyilladavarge sadgati neeneyadudake Rati patiya pitane. Salah! Pancha liya man raxane nimna hadi nalli tumba sogasagi band ide. Sanskritiya ulvigagi ee hadugalu ee samayadalliyugalu beku

  • @heman8993
    @heman8993 2 роки тому

    Awesome madam. Tanq for sharing liriks

  • @YADAVEDITZ_07
    @YADAVEDITZ_07 2 роки тому +1

    Plz share dis lyrics

  • @prathibhavenkoba3588
    @prathibhavenkoba3588 2 роки тому

    Very sooding to ears. Share the lyrics.

  • @vishnuv8342
    @vishnuv8342 2 роки тому

    Pleas share lyrics