Draupadi Maana Rakshana- Udaya Raga Kruthi
Вставка
- Опубліковано 13 вер 2024
- ದ್ರೌಪದೀ ಮಾನ ರಕ್ಷಣಾ- ಉದಯ ರಾಗ ಕೃತಿ
ಶ್ರೀ ಪುರಂದರ ದಾಸ ವಿರಚಿತ 🙏
ವಾಸುದೇವಾಯ ನಮೋ ವಾಸುದೇವಾಯ ನಮೋ
ವಾಸುಕೀ ಶಯನ ಸುರನಮಿತ ಚರಣಾಂಭೋಜ
ಭಕ್ತ ಪೋಷಕನೆ ರಕ್ಷಿಪುದು ಕೇಶವ ಅನಾಥ ಬಂಧು||೧||
ಸೊಂಡಿಲಾ ಪುರದೊಳಗೆ ದುರುಳ ದುರ್ಯೋಧನನು
ಪಾಂಡು ನಂದನರೊಡನೆ ಕಪಟ ಜೂಜುಗಳಾಡಿ
ಗಂಡರೈವರ ಮುಂದೆ ನೃಪರ ಸತಿಯಳ ಸೆರಗ
ಲಂಡ ದುಶ್ವಾಸ ಪಿಡಿಯೇ||೨||
ಕಂಡು ಮನದಲಿ ಬೆದರಿ ಪರಮಾತ್ಮ ಪರಿಪೂರ್ಣ
ಪುಂಡರೀಕಾಕ್ಷ ರಕ್ಷಿಪುದೆನುತಾ
ಮೊರೆಯಿಟ್ಟಳಂಡಜಾ ತುರುಗಗಾಗ ||೩||
ಪತಿಗಳೈವರು ಸತ್ಯ ವ್ರತದಿ ಸುಮ್ಮನೆ ಇಹರು
ಅತಿ ಕ್ಲೇಷ ಪಡುತಿಹರು ವಿದುರ ಭೀಷ್ಮಾದಿಗಳು
ಸುತನ ಮೇಲಿನ ಮೋಹ ಮಮತೆಯಲಿ ಸುಮ್ಮನಿಹ
ಗತ ಲೋಚನದ ಮಾವನು||೪||
ಕೃತಕಪಟದಲ್ಲಿಹರು ಶಕುನಿ ಕರ್ಣಾದಿಗಳು
ಹಿತವ ಬಯಸುವರ ಕಾಣೆ ನಾನಿದರೊಳಗೆ
ಗತಿಯಿಲ್ಲದಿದ್ದೋರ್ಗೆ ಗತಿ ನೀನೆ ಯದುಕುಲಕೆ
ರತಿಪತಿ ಪಿತನೆ ಸಲಹೋ||೫||
ಪಾವುಕನ ಉರಿಯೊಳಗೆ ಹೊಕ್ಕು ಹೊರಡಲಿಬಹುದು
ಹಾವುಗಳ ಹೆಡೆ ಹಿಡಿದು ಎಳೆದೆಳೆದು ತರಬಹುದು
ತೀವಿರ್ದ ಮಡುವಿನೊಳು ಧುಮುಕಲುಬಹುದು
ಗರಳವ ಸೇವಿಸಲಿಬಹುದು||೬||
ಸಾವಿಗಂಜದೆ ಕೊರಳ ಕತ್ತರಿಸಲೀಬಹುದು
ಜೀವ ಇದ್ದಂತೆ ಲಜ್ಜೆಯ ತೊರೆಯಲಾರೆನೈ
ಆವ ಪರಿಯಲಿ ನಿನ್ನ ನಂಬಿದ್ದನಾಥಳನು
ದೇವಾಭಿಮಾನವನು ಕಾಯೋ||೭||
ಅತ್ತೆಯಲ್ಲವೆ ಎನಗೆ ಗಾಂಧಾರಿ ದೇವಿಯರು
ಮೃತ್ಯುವಂತಿವನೆಳೆವ ಬಿಡಿಸ ಬಾರದೆ ತಾಯೇ
ಉತ್ತುಮಳು ನೀ ನೆಗೆಣ್ಣೆ ಭಾನುಮತೀ
ಇತ್ತ ದಯಮಾಡಿ ನೋಡೇ||೮||
ಸುತ್ತ ನೆರೆದಿಹ ಸಭೆಯ ಪರಿವಾರದವರೆಲ್ಲ
ಪೆತ್ತುದಿಲ್ಲವೆ ಎನ್ನ ಪೋಲ್ವ ಹೆಣ್ಮಕ್ಕಳನು
ಹುತ್ತದಲಿ ಹುದುಗಿದ್ದ ಸರ್ಪ ಸಾಯಲು ಬಹುದೇ
ತತ್ವ ಬಾಹಿರರಾದಿರಾ||೯||
ಆರಿಗ್ವೊರಲಿದರೆನ್ನ ದೂರು ಕೇಳುವರಿಲ್ಲ
ಸಾರಿದರೆ ಪೊರೆವ ಕಂಸಾರಿ ನೀನಲ್ಲ
ನನಗಾರು ಆಪ್ತ ಬಂಧು||೧೦||
ಮಾರಿದರು ಧರ್ಮ ದೇವತರಗೆನ್ನ ವಲ್ಲಭರು
ಭಾರ ನಿನ್ನದು ಎಂದು ನಂಬಿದ್ದನಾಥಳನು
ನೀರಿನೊಳಗದ್ದು ಕ್ಷೀರದೊಳಗದ್ದು ನೀನೇ ಗತಿ
ನಾರಾಯಣನೆ ರಕ್ಚಿಸೋ||೧೧||
ಅಸುರ ಬೆನ್ನಟ್ಟಿ ಬರೆ ಪಶುಪತಿಯ ರಕ್ಷಿಸಿದೆ
ಋಷಿ ಶಾಪವನು ಧರಿಸಿದ್ದಂಬರೀಷನ ಕಾಯ್ದೆ
ವಸುಧೆಯಲಿ ಕಲ್ಲಾಗಿ ಬಿದ್ದಹಲ್ಯೆಯ ಪೊರೆದೆ
ಶಿಷುವು ಪ್ರಹ್ಲಾದಗೊಲಿದೆ||೧೨||
ಹಸುಳೆ ಧ್ರುವರಾಯಂಗೆ ಹೆಸರುಳ್ಳ ಪದವಿತ್ತೆ
ದಶಕಂಠನನುಜಂಗೆ ಸ್ಥಿರ ಪಟ್ಟವನು ಕೊಟ್ಟೆ
ಹೆಸರುಗೊಂಡರೆ ಸುತನ ಅಜಮಿಳನ ಕಾಯ್ದೇ
ವಸುದೇವ ಸುತನೆ ಸಲಹೋ||೧೩||
ಲಕ್ಷ್ಮೀ ಮನೋಹರನೆ ಇಕ್ಷು ಛಾಪನ ಪಿತನೆ
ಯಕ್ಷ ಗಂಧರ್ವ ಮುನಿ ಅಮರೇಂದ್ರ ವಂದಿತನೆ
ಅಕ್ಷಯನೆ ಆಟದಲಿ ಜಗವ ಮೋಹಿಪನೆ
ಸೂಕ್ಷ್ಮದೊಳು ಪರಿಪೂರ್ಣನೆ||೧೪||
ಅಕ್ಷಯ ಅಸುರಾಂತಕಗೆ ಅಜ ಪದವಿಯನಿತ್ಯೋ
ದಕ್ಷ ಸುತೆ ಪತಿ ಸಖನೆ ಪಕ್ಷಿವಾಹನ ದೇವ
ರಕ್ಷಿಸೋ ಅನಾಥ ಬಂಧು||೧೫||
ತಂದೆ ತಾಯಿಯು ನೀನೆ ಬಂಧು ಬಳಗವು ನೀನೇ
ಇಂದೆನ್ನ ಕುಲಸ್ವಾಮಿ ಗುರು ಪಿತಾಮಹ ನೀನೇ
ಎಂದು ನಂಬಿದೆ ಎನ್ನ ಮಾನ ಅಭಿಮಾನ
ಮುಕುಂದ ನಿನಗೊಪ್ಪಿಸಿದೆನೈ||೧೬||
ಕೊಂದರೊಳ್ಳಿತು ಎನ್ನ ಕಾಯ್ದರೊಳ್ಳಿತು ಎಂದು
ಕಣ್ಗಳನೆ ಮುಚ್ಚಿ ಕರಗಳ ನೆಗಹೀ
ಗೋವಿಂದಾ! ಎಂದಳು ಮೃಗಾಕ್ಷೀ||೧೭||
ಇಂತೆನುತ ದ್ರೌಪದಿಯು ಮೊರೆಯಿಡುವುದನು ಕೇಳಿ
ಅಂತರಾತ್ಮಕ ಕೃಷ್ಣ ದ್ವಾರಕಾ ಪುರದೊಳಗೆ
ಕಾಂತೆ ರುಕ್ಮಿಣೀ ಸತ್ಯಭಾಮೆಯರ ಒಡನೆ
ಏಕಾಂತ ಭವನದಲಿ ಕುಳಿತು||೧೮||
ಕುಂತಿ ನಂದನರ ಸತಿ ಉಟ್ಟುದಕ್ಷಯವಾಗಿ
ಸಂತೋಷಗೊಳಲೆಂದು ವರವಿತ್ತ ಶ್ರೀ ಕೃಷ್ಣ
ಎಂತುಂಟು ಹರಿಕೃಪೆಯು ತನ್ನ ಭಕ್ತರ ಮೇಲೆ
ಅನಂತ ವಸ್ತ್ರಗಳಾದವೈ||೧೯||
ಸೆಳೆಯುತಿದ್ದನು ಖಳನು ಬೆಳೆಯುತಿದ್ದವು ಸೀರೆ
ಚೆಲುವ ಪೊಂಬಟ್ಟೆ ನಾನಾ ವಿಚಿತ್ರದಾ ಬಣ್ಣ
ಹೊನಲು ತುಂಬಿದ ಸೀರೆ ಎಳೆದೆಳೆದು ಪಾಪಾತ್ಮ
ಬಳಲಿ ಬಿದ್ದನು ಭುವಿಯೊಳು||೨೦||
ಕಳೆಯುಗುಂದಿತು ಮೋರೆ ಶಕುನಿ ದುರ್ಯೋಧನರು
ಬಳಿಯೆ ನಿಂತಿದ್ದ ಭಟರನೆ ಕರೆದು ನೇಮಿಸುತ
ತಿಳುಹುದಲೆ ಬೊಕ್ಕಸಕೆ ಕಳುಹು ವಸ್ತ್ರಗಳ ಎನಲು
ನಳಿನಮುಖಿ ತಿಳಿದಳದನು||೨೧||
ಸಿಟ್ಟಿನಲಿ ಪತಿವ್ರತೆಯು ಕಣ್ತೆರೆದು ನೋಡಿದಳು
ಬೆಟ್ಟದಂತೊಟ್ಟಿದ್ದ ವಸ್ತ್ರ ರಾಶಿಗಳೆಲ್ಲ
ಸುಟ್ಟಗ್ನಿ ಹೊರಸೂಸಿ ರಾಜಮನೆ ಕೆಲವು
ಪಟ್ಟಣಾಹುತಿಗೊಂಡವೈ||೨೨||
ಕೊಟ್ಟಳೇ ಕಮಲಮುಖಿ ಕುರುಪತಿಗೆ ಶಾಪವನು
ಕೊಟ್ಟಳಾ ರಣದಿ ಭೀಮಸೇನನ ಗದೆ ಬಂದು
ಕುಟ್ಟಿ ಕೆಡಹಲಿ ನಿನ್ನ ತೊಡೆಗಳೆರಡನು ಎಂದು
ಇಟ್ಟ ನುಡಿ ತಪ್ಪಲುಂಟೇ||೨೩||
ಮೂಡಿದವು ಪ್ರತಿ ಸೂರ್ಯ ಧೂಮಕೇತುಗಳು
ಓಡಾಡಿದವು ಗಗನದಲಿ ಹದ್ದು ಕಾಗಿಗಳು
ಕಾದಾಡಿದವು ಮೃಗಜಾತಿ ಚಲಿಸಿದವು ಪ್ರತಿಮೆ
ರೂಢಿ ಗಡಗಡ ನಡುಗಿತು||೨೪||
ಮೂಡಿದವು ನಕ್ಷತ್ರ ರಾಶಿಗಳು ದಿವದಿ
ಮಾತಾಡಿದವು ಅಶರೀರ ವಾಕ್ಯಗಳು ಪುರಜನರು
ಕೇಡು ಕೌರವ ರಾಯಗೆಂದು ನಿಶ್ಚಯಿಸಿ
ಓಡಿ ಮನೆಗಳ ಹೊಕ್ಕರು||೨೫||
ಹರುಷ ಪಟ್ಟರು ಮನದಿ ವಿದುರ ಭೀಷ್ಮಾದಿಗಳು
ಸುರರು ನಾರದರಂದು ದ್ರೌಪದಿಯ ಸಿರಿ ಮುಡಿಗೆ
ಸುರಿಸಿದರು ಪೂ ಮಳೆಗಳಾ||೨೬||
ಹರಿಯ ನಾಮಾವಳಿಯ ಪೊಗಳುತಲೆ ದಿವಿಜೇಂದ್ರ
ತಿರುಗಿ ಪೋದನು ತನ್ನ ಪಟ್ಟಣಕೆ ಧರೆ ಮೇಲೆ
ಹರಿನಾಮ ಪೊಗಳುವರೆ ಧನ್ಯರೋ ಲೋಕದಲಿ
ದ್ರೌಪದಿಯ ಹರಿನಾಮವೇ ಕಾಯಿತು||೨೭||
ಯಾರು ಉದಯ ಕಾಲದೊಳೆದ್ದು ಭಾವ ಭಕ್ತಿಯಲಿ
ಭಾವ ಶುದ್ಧ್ಯಿಂದ ಭಜನೆ ಮಾಳ್ಪಂಥವರ
ಸಾವಿರಾರ್ ಜನ್ಮದ ಸಂಚಿಸಿದ ಪಾಪಗಳು
ತಾವೆ ಹತವಾಗೋವೆಂದು||೨೮||
ಶ್ರೀ ವಾಸುದೇವ ಆಜ್ಞಾಪಿಸಿದ ರುಕ್ಮಿಣಿಗೆ
ದೇವಿ ಕೇಳೆನ್ನ ಭಾಷೆಯ ಮುಂದೆ ಅರ್ಜುನಗೆ
ನಾನೇ ಸಾರಥಿಯಾಗಿ ಸಲಹುವೆನು ಅವರೆನ್ನ
ಜೀವ ಪಾಂಡವರೆಂದನು||೨೯||
ಮಂಗಳಮ್ ಮತ್ಸ್ಯ ಕೂರ್ಮ ವರಾಹ ನರಸಿಂಹನಿಗೆ
ಮಂಗಳಮ್ ವಟು ಭಾರ್ಗವ ರಾಮ ಕೃಷ್ಣರಿಗೆ
ಮಂಗಳಮ್ ಪುರಂದರ ವಿಠಲ ರಾಯನಿಗೆ
ಜಯ ಮಂಗಳಮ್ ನಿತ್ಯ ಶುಭ ಮಂಗಳಮ್ ||೩೦||
||ಜಯ ಮಂಗಳಮ್ ನಿತ್ಯ ಶುಭ ಮಂಗಳಮ್ ||
What a soulful rendition 🙏🙏🙏
Super
Sooooper.chrlo hadideeri.
Chrlo hadideeri
Ad bhut! presentation,bharati mata sharada shachidevi commendable. Nimna hadugarike sarisatiye illa very pleasing. Bharateeya sanskritiya samsarane
So nice
ಧನ್ಯಾಸ್ಮಿ 🙏 ತಮ್ಮಂಥ ಮಹಿಮರು ಈ ಪ್ರಸ್ತುತಿಯನ್ನು ಮನ್ನಿಸಿದ್ದಕ್ಕೆ ಕೃತಾರ್ಥಳಾದೆ 🙏🙏
Engrossing, unassuming class! ಶಾಂತ, ಸುಶ್ರಾವ್ಯ, ನಮ್ರ, ಭಕ್ತಿಪೂರ್ಣ ಗಾಯನ.
🙏👌ಬಹಳ ಅದ್ಭುತವಾಗಿದೆ
Very devine voice. Manassige tumba santosha vayitu amma👍🙏🙏😊
ವಾಸುದೇವಾಯ ನಮೋ ವಾಸುದೇವಾಯ ನಮೋ
ವಾಸುಕೀ ಶಯನ ಸುರನಮಿತ ಚರಣಾಂಭೋಜ
ಭಕ್ತ ಪೋಷಕನೆ ರಕ್ಷಿಪುದು ಕೇಶವ ಅನಾಥ ಬಂಧು||೧||
ಸೊಂಡಿಲಾ ಪುರದೊಳಗೆ ದುರುಳ ದುರ್ಯೋಧನನು
ಪಾಂಡು ನಂದನರೊಡನೆ ಕಪಟ ಜೂಜುಗಳಾಡಿ
ಗಂಡರೈವರ ಮುಂದೆ ನೃಪರ ಸತಿಯಳ ಸೆರಗ
ಲಂಡ ದುಶ್ವಾಸ ಪಿಡಿಯೇ||೨||
ಕಂಡು ಮನದಲಿ ಬೆದರಿ ಪರಮಾತ್ಮ ಪರಿಪೂರ್ಣ
ಪುಂಡರೀಕಾಕ್ಷ ರಕ್ಷಿಪುದೆನುತಾ
ಮೊರೆಯಿಟ್ಟಳಂಡಜಾ ತುರುಗಗಾಗ ||೩||
ಪತಿಗಳೈವರು ಸತ್ಯ ವ್ರತದಿ ಸುಮ್ಮನೆ ಇಹರು
ಅತಿ ಕ್ಲೇಷ ಪಡುತಿಹರು ವಿದುರ ಭೀಷ್ಮಾದಿಗಳು
ಸುತನ ಮೇಲಿನ ಮೋಹ ಮಮತೆಯಲಿ ಸುಮ್ಮನಿಹ
ಗತ ಲೋಚನದ ಮಾವನು||೪||
ಕೃತಕಪಟದಲ್ಲಿಹರು ಶಕುನಿ ಕರ್ಣಾದಿಗಳು
ಹಿತವ ಬಯಸುವರ ಕಾಣೆ ನಾನಿದರೊಳಗೆ
ಗತಿಯಿಲ್ಲದಿದ್ದೋರ್ಗೆ ಗತಿ ನೀನೆ ಯದುಕುಲಕೆ
ರತಿಪತಿ ಪಿತನೆ ಸಲಹೋ||೫||
ಪಾವುಕನ ಉರಿಯೊಳಗೆ ಹೊಕ್ಕು ಹೊರಡಲಿಬಹುದು
ಹಾವುಗಳ ಹೆಡೆ ಹಿಡಿದು ಎಳೆದೆಳೆದು ತರಬಹುದು
ತೀವಿರ್ದ ಮಡುವಿನೊಳು ಧುಮುಕಲುಬಹುದು
ಗರಳವ ಸೇವಿಸಲಿಬಹುದು||೬||
ಸಾವಿಗಂಜದೆ ಕೊರಳ ಕತ್ತರಿಸಲೀಬಹುದು
ಜೀವ ಇದ್ದಂತೆ ಲಜ್ಜೆಯ ತೊರೆಯಲಾರೆನೈ
ಆವ ಪರಿಯಲಿ ನಿನ್ನ ನಂಬಿದ್ದನಾಥಳನು
ದೇವಾಭಿಮಾನವನು ಕಾಯೋ||೭||
ಅತ್ತೆಯಲ್ಲವೆ ಎನಗೆ ಗಾಂಧಾರಿ ದೇವಿಯರು
ಮೃತ್ಯುವಂತಿವನೆಳೆವ ಬಿಡಿಸ ಬಾರದೆ ತಾಯೇ
ಉತ್ತುಮಳು ನೀ ನೆಗೆಣ್ಣೆ ಭಾನುಮತೀ
ಇತ್ತ ದಯಮಾಡಿ ನೋಡೇ||೮||
ಸುತ್ತ ನೆರೆದಿಹ ಸಭೆಯ ಪರಿವಾರದವರೆಲ್ಲ
ಪೆತ್ತುದಿಲ್ಲವೆ ಎನ್ನ ಪೋಲ್ವ ಹೆಣ್ಮಕ್ಕಳನು
ಹುತ್ತದಲಿ ಹುದುಗಿದ್ದ ಸರ್ಪ ಸಾಯಲು ಬಹುದೇ
ತತ್ವ ಬಾಹಿರರಾದಿರಾ||೯||
ಆರಿಗ್ವೊರಲಿದರೆನ್ನ ದೂರು ಕೇಳುವರಿಲ್ಲ
ಸಾರಿದರೆ ಪೊರೆವ ಕಂಸಾರಿ ನೀನಲ್ಲ
ನನಗಾರು ಆಪ್ತ ಬಂಧು||೧೦||
ಮಾರಿದರು ಧರ್ಮ ದೇವತರಗೆನ್ನ ವಲ್ಲಭರು
ಭಾರ ನಿನ್ನದು ಎಂದು ನಂಬಿದ್ದನಾಥಳನು
ನೀರಿನೊಳಗದ್ದು ಕ್ಷೀರದೊಳಗದ್ದು ನೀನೇ ಗತಿ
ನಾರಾಯಣನೆ ರಕ್ಚಿಸೋ||೧೧||
ಅಸುರ ಬೆನ್ನಟ್ಟಿ ಬರೆ ಪಶುಪತಿಯ ರಕ್ಷಿಸಿದೆ
ಋಷಿ ಶಾಪವನು ಧರಿಸಿದ್ದಂಬರೀಷನ ಕಾಯ್ದೆ
ವಸುಧೆಯಲಿ ಕಲ್ಲಾಗಿ ಬಿದ್ದಹಲ್ಯೆಯ ಪೊರೆದೆ
ಶಿಷುವು ಪ್ರಹ್ಲಾದಗೊಲಿದೆ||೧೨||
ಹಸುಳೆ ಧ್ರುವರಾಯಂಗೆ ಹೆಸರುಳ್ಳ ಪದವಿತ್ತೆ
ದಶಕಂಠನನುಜಂಗೆ ಸ್ಥಿರ ಪಟ್ಟವನು ಕೊಟ್ಟೆ
ಹೆಸರುಗೊಂಡರೆ ಸುತನ ಅಜಮಿಳನ ಕಾಯ್ದೇ
ವಸುದೇವ ಸುತನೆ ಸಲಹೋ||೧೩||
ಲಕ್ಷ್ಮೀ ಮನೋಹರನೆ ಇಕ್ಷು ಛಾಪನ ಪಿತನೆ
ಯಕ್ಷ ಗಂಧರ್ವ ಮುನಿ ಅಮರೇಂದ್ರ ವಂದಿತನೆ
ಅಕ್ಷಯನೆ ಆಟದಲಿ ಜಗವ ಮೋಹಿಪನೆ
ಸೂಕ್ಷ್ಮದೊಳು ಪರಿಪೂರ್ಣನೆ||೧೪||
ಅಕ್ಷಯ ಅಸುರಾಂತಕಗೆ ಅಜ ಪದವಿಯನಿತ್ಯೋ
ದಕ್ಷ ಸುತೆ ಪತಿ ಸಖನೆ ಪಕ್ಷಿವಾಹನ ದೇವ
ರಕ್ಷಿಸೋ ಅನಾಥ ಬಂಧು||೧೫||
ತಂದೆ ತಾಯಿಯು ನೀನೆ ಬಂಧು ಬಳಗವು ನೀನೇ
ಇಂದೆನ್ನ ಕುಲಸ್ವಾಮಿ ಗುರು ಪಿತಾಮಹ ನೀನೇ
ಎಂದು ನಂಬಿದೆ ಎನ್ನ ಮಾನ ಅಭಿಮಾನ
ಮುಕುಂದ ನಿನಗೊಪ್ಪಿಸಿದೆನೈ||೧೬||
ಕೊಂದರೊಳ್ಳಿತು ಎನ್ನ ಕಾಯ್ದರೊಳ್ಳಿತು ಎಂದು
ಕಣ್ಗಳನೆ ಮುಚ್ಚಿ ಕರಗಳ ನೆಗಹೀ
ಗೋವಿಂದಾ! ಎಂದಳು ಮೃಗಾಕ್ಷೀ||೧೭||
ಇಂತೆನುತ ದ್ರೌಪದಿಯು ಮೊರೆಯಿಡುವುದನು ಕೇಳಿ
ಅಂತರಾತ್ಮಕ ಕೃಷ್ಣ ದ್ವಾರಕಾ ಪುರದೊಳಗೆ
ಕಾಂತೆ ರುಕ್ಮಿಣೀ ಸತ್ಯಭಾಮೆಯರ ಒಡನೆ
ಏಕಾಂತ ಭವನದಲಿ ಕುಳಿತು||೧೮||
ಕುಂತಿ ನಂದನರ ಸತಿ ಉಟ್ಟುದಕ್ಷಯವಾಗಿ
ಸಂತೋಷಗೊಳಲೆಂದು ವರವಿತ್ತ ಶ್ರೀ ಕೃಷ್ಣ
ಎಂತುಂಟು ಹರಿಕೃಪೆಯು ತನ್ನ ಭಕ್ತರ ಮೇಲೆ
ಅನಂತ ವಸ್ತ್ರಗಳಾದವೈ||೧೯||
ಸೆಳೆಯುತಿದ್ದನು ಖಳನು ಬೆಳೆಯುತಿದ್ದವು ಸೀರೆ
ಚೆಲುವ ಪೊಂಬಟ್ಟೆ ನಾನಾ ವಿಚಿತ್ರದಾ ಬಣ್ಣ
ಹೊನಲು ತುಂಬಿದ ಸೀರೆ ಎಳೆದೆಳೆದು ಪಾಪಾತ್ಮ
ಬಳಲಿ ಬಿದ್ದನು ಭುವಿಯೊಳು||೨೦||
ಕಳೆಯುಗುಂದಿತು ಮೋರೆ ಶಕುನಿ ದುರ್ಯೋಧನರು
ಬಳಿಯೆ ನಿಂತಿದ್ದ ಭಟರನೆ ಕರೆದು ನೇಮಿಸುತ
ತಿಳುಹುದಲೆ ಬೊಕ್ಕಸಕೆ ಕಳುಹು ವಸ್ತ್ರಗಳ ಎನಲು
ನಳಿನಮುಖಿ ತಿಳಿದಳದನು||೨೧||
ಸಿಟ್ಟಿನಲಿ ಪತಿವ್ರತೆಯು ಕಣ್ತೆರೆದು ನೋಡಿದಳು
ಬೆಟ್ಟದಂತೊಟ್ಟಿದ್ದ ವಸ್ತ್ರ ರಾಶಿಗಳೆಲ್ಲ
ಸುಟ್ಟಗ್ನಿ ಹೊರಸೂಸಿ ರಾಜಮನೆ ಕೆಲವು
ಪಟ್ಟಣಾಹುತಿಗೊಂಡವೈ||೨೨||
ಕೊಟ್ಟಳೇ ಕಮಲಮುಖಿ ಕುರುಪತಿಗೆ ಶಾಪವನು
ಕೊಟ್ಟಳಾ ರಣದಿ ಭೀಮಸೇನನ ಗದೆ ಬಂದು
ಕುಟ್ಟಿ ಕೆಡಹಲಿ ನಿನ್ನ ತೊಡೆಗಳೆರಡನು ಎಂದು
ಇಟ್ಟ ನುಡಿ ತಪ್ಪಲುಂಟೇ||೨೩||
ಮೂಡಿದವು ಪ್ರತಿ ಸೂರ್ಯ ಧೂಮಕೇತುಗಳು
ಓಡಾಡಿದವು ಗಗನದಲಿ ಹದ್ದು ಕಾಗಿಗಳು
ಕಾದಾಡಿದವು ಮೃಗಜಾತಿ ಚಲಿಸಿದವು ಪ್ರತಿಮೆ
ರೂಢಿ ಗಡಗಡ ನಡುಗಿತು||೨೪||
ಮೂಡಿದವು ನಕ್ಷತ್ರ ರಾಶಿಗಳು ದಿವದಿ
ಮಾತಾಡಿದವು ಅಶರೀರ ವಾಕ್ಯಗಳು ಪುರಜನರು
ಕೇಡು ಕೌರವ ರಾಯಗೆಂದು ನಿಶ್ಚಯಿಸಿ
ಓಡಿ ಮನೆಗಳ ಹೊಕ್ಕರು||೨೫||
ಹರುಷ ಪಟ್ಟರು ಮನದಿ ವಿದುರ ಭೀಷ್ಮಾದಿಗಳು
ಸುರರು ನಾರದರಂದು ದ್ರೌಪದಿಯ ಸಿರಿ ಮುಡಿಗೆ
ಸುರಿಸಿದರು ಪೂ ಮಳೆಗಳಾ||೨೬||
ಹರಿಯ ನಾಮಾವಳಿಯ ಪೊಗಳುತಲೆ ದಿವಿಜೇಂದ್ರ
ತಿರುಗಿ ಪೋದನು ತನ್ನ ಪಟ್ಟಣಕೆ ಧರೆ ಮೇಲೆ
ಹರಿನಾಮ ಪೊಗಳುವರೆ ಧನ್ಯರೋ ಲೋಕದಲಿ
ದ್ರೌಪದಿಯ ಹರಿನಾಮವೇ ಕಾಯಿತು||೨೭||
ಯಾರು ಉದಯ ಕಾಲದೊಳೆದ್ದು ಭಾವ ಭಕ್ತಿಯಲಿ
ಭಾವ ಶುದ್ಧ್ಯಿಂದ ಭಜನೆ ಮಾಳ್ಪಂಥವರ
ಸಾವಿರಾರ್ ಜನ್ಮದ ಸಂಚಿಸಿದ ಪಾಪಗಳು
ತಾವೆ ಹತವಾಗೋವೆಂದು||೨೮||
ಶ್ರೀ ವಾಸುದೇವ ಆಜ್ಞಾಪಿಸಿದ ರುಕ್ಮಿಣಿಗೆ
ದೇವಿ ಕೇಳೆನ್ನ ಭಾಷೆಯ ಮುಂದೆ ಅರ್ಜುನಗೆ
ನಾನೇ ಸಾರಥಿಯಾಗಿ ಸಲಹುವೆನು ಅವರೆನ್ನ
ಜೀವ ಪಾಂಡವರೆಂದನು||೨೯||
ಮಂಗಳಮ್ ಮತ್ಸ್ಯ ಕೂರ್ಮ ವರಾಹ ನರಸಿಂಹನಿಗೆ
ಮಂಗಳಮ್ ವಟು ಭಾರ್ಗವ ರಾಮ ಕೃಷ್ಣರಿಗೆ
ಮಂಗಳಮ್ ಪುರಂದರ ವಿಠಲ ರಾಯನಿಗೆ
ಜಯ ಮಂಗಳಮ್ ನಿತ್ಯ ಶುಭ ಮಂಗಳಮ್ ||೩೦||
||ಜಯ ಮಂಗಳಮ್ ನಿತ್ಯ ಶುಭ ಮಂಗಳಮ್ ||
Hare Krishna. Govindha, Pundareekaksha, Arvindalochana, Rakshamam Pahimam
ಅದ್ಬುತವಾಗಿದೆ ಮೇಂಡಂ...ತುಂಬಾ ಹೃದಯದ ಧನ್ಯವಾದಗಳು
Nimma gayana thumba chenagide
Very nice songs
ಮೇಡಂ, ನಿಮ್ಮ ಹಾಡನ್ನು ವರ್ಣಿಸಲು ಶಬ್ದಗಳಿಲ್ಲ, ಕೇಳಿದಾಗ ಕಣ್ಣಲ್ಲಿ ನೀರು ಬರುತ್ತದೆ. 🙏🙏🙏🙏🙏🙏👌👌🙏🙏
nimma mathu nija nanagu hage aethu
Hare Krishna 🙏🙏
Patigalivaru satyavratadaliharu ati klesh padutiharu vidura bheeshmadigalu suhana melinmoha mamateyali summa niha gata lochanada navanu. Hitav bayasuvar kane❤ gatiyilladavarge sadgati neeneyadudake Rati patiya pitane. Salah! Pancha liya man raxane nimna hadi nalli tumba sogasagi band ide. Sanskritiya ulvigagi ee hadugalu ee samayadalliyugalu beku
Awesome madam. Tanq for sharing liriks
Plz share dis lyrics
Lyrics shared
Very sooding to ears. Share the lyrics.
Lyrics shared
Pleas share lyrics